News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೀವನಾಂಶ ಹೋರಾಟದಲ್ಲಿ ಗೆದ್ದ ತ್ರಿವಳಿ ತಲಾಖ್‌ ಅರ್ಜಿದಾರೆ: ಮೋದಿಗೆ ಧನ್ಯವಾದ

 

ಸಹರಾನ್‌ಪುರ: ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆಯರಲ್ಲಿ ಒಬ್ಬರಾದ ಅತಿಯಾ ಸಬ್ರಿ ಅವರು ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶ ಹೋರಾಟದಲ್ಲಿ ಜಯಗಳಿಸಿದ್ದಾರೆ. ವಿ ಮಾಸಿಕ ನಿರ್ವಹಣೆಯಾಗಿ ಇವರಿಗೆ 21,000 ರೂ.ನೀಡುವಂತೆ ಚ್ಛೇದಿತ ಗಂಡನಿಗೆ ನ್ಯಾಯಾಲಯ ಆದೇಶಿಸಿದೆ. ಕಳೆದ ಐದು ವರ್ಷಗಳಿಂದ ಈ ಪ್ರಕರಣದಲ್ಲಿ ಸ್ಪರ್ಧಿಸುತ್ತಿರುವುದರಿಂದ ಆಕೆಗೆ 13.4 ಲಕ್ಷ ರೂ.ಅನ್ನು ಕೂಡ ಪರಿಹಾರವಾಗಿ ನೀಡಲಾಗಿದೆ.

ಸಬ್ರಿ ಮಾರ್ಚ್ 25, 2012 ರಂದು ಮೊಹಮ್ಮದ್ ವಾಜಿದ್ ಅಲಿಯನ್ನು ವಿವಾಹವಾದರು. ಒಂದು ವರ್ಷದ ನಂತರ, ಅವರು ತಮ್ಮ ಮೊದಲ ಮಗಳಿಗೆ ಜನ್ಮ ನೀಡಿದರು. 2014 ರಲ್ಲಿ, ಅವರು ತನ್ನ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದರು, ಅದರ ನಂತರ ಅವರ ಗಂಡ ಮತ್ತು ಆತನ ಮನೆಯವರಿಂದ ಕಿರುಕುಳ ಆರಂಭವಾಯಿತು. ಗಂಡು ಮಗುವನ್ನು ಬಯಸುತ್ತಿದ್ದ ಅವರು ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕಾಗಿ ಇವರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿದೆ ಎಂದು ಸಾಬ್ರಿ ಆರೋಪಿಸಿದ್ದಾರೆ. ನವೆಂಬರ್ 2, 2015 ರಂದು ಪತಿ ಅವರಿಗೆ ತ್ರಿವಳಿ ತಲಾಖ್‌ ನೀಡಿದ ಬಳಿಕ ಅವರ ವೈವಾಹಿಕ ಜೀವನ ಕೊನೆಗೊಂಡಿತು.‌

ನವೆಂಬರ್ 24, 2015 ರಂದು ಸಬ್ರಿ ಪತಿಯಿಂದ ಜೀವನಾಂಶ ಕೋರಿ ಸಹರನ್‌ಪುರದ ನ್ಯಾಯಾಲಯವನ್ನು ಸಂಪರ್ಕಿಸಿದರು. ಈ ನಡುವೆ, ತ್ರಿವಳಿ ತಲಾಖ್‌ಗೆ ನಿಷೇಧ ಹೇರಬೇಕೆಂದು ಕೋರಿ ಸಬ್ರಿ ಸುಪ್ರೀಂಕೋರ್ಟ್‌ಗೂ ಮೊರೆ ಹೋದರು. ಸಬ್ರಿಗೆ ಐತಿಹಾಸಿಕ ವಿಜಯ ದೊರೆತಿದ್ದು, ಐದು ನ್ಯಾಯಾಧೀಶರ ಪೀಠವು ತ್ರಿವಳಿ ತಲಾಖ್‌ ಅನ್ನು ನಿಷೇಧಿಸಿತು. ಈ ನಡುವೆ, ಸಹರನ್‌ಪುರದ ಕುಟುಂಬ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಅವರ ಹೋರಾಟ ಮುಂದುವರೆಯಿತು.

ಸಹರನ್‌ಪುರ ನ್ಯಾಯಾಲಯದಲ್ಲಿ ವಿಚಾರಣೆ ಐದು ವರ್ಷಗಳ ಕಾಲ ನಡೆಯಿತು, ನ್ಯಾಯಮೂರ್ತಿ ನರೇಂದ್ರ ಕುಮಾರ್ ಅವರು ತೀರ್ಪನ್ನು ಸಬ್ರಿಯ ಪರವಾಗಿ ಅಂಗೀಕರಿಸಿದ್ದಾರೆ. ಎಂಟು ಮತ್ತು ಏಳು ವರ್ಷದ ವಯಸ್ಸಿನ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಲು ನ್ಯಾಯಮೂರ್ತಿ ಕುಮಾರ್ ಅವರು ಸಬ್ರಿಯ ಪತಿಗೆ ಮಾಸಿಕ 21,000 ರೂ. ನೀಡುವಂತೆ ಆದೇಶಿಸಿದ್ದಾರೆ. ಐದು ವರ್ಷಗಳ ಹಿಂದೆ ಈ ಪ್ರಕರಣ ದಾಖಲಾಗಿದ್ದರಿಂದ ಸಬ್ರಿಗೆ 14 . 4 ಲಕ್ಷ ರೂ ಅನ್ನು ಕೂಡ ಪರಿಹಾರವಾಗಿ ನೀಡಿದ್ದಾರೆ.

ಕಾನೂನು ಹೋರಾಟದಲ್ಲಿ ಜಯಗಳಿಸಿರುವ ಸಬ್ರಿ ಅವರು 14,000 ವರ್ಷಗಳಷ್ಟು ಹಳೆಯದಾದ ತ್ರಿವಳಿ ತಲಾಖ್ ದುಷ್ಟ ಪದ್ಧತಿಯನ್ನು ಕೊನೆಗೊಳಿಸಿದ್ದಕ್ಕಾಗಿ  ಸುಪ್ರೀಂಕೋರ್ಟ್ ಅನ್ನು ಶ್ಲಾಘಿಸಿದ್ದಾರೆ ಮತ್ತು ಮುಸ್ಲಿಂ ಮಹಿಳೆಯರನ್ನು ಸಬಲೀಕರಣಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದಲ್ಲದೆ, ತಾರತಮ್ಯ ಮತ್ತು ಕಿರುಕುಳದ ವಿರುದ್ಧದ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು ಸೇರಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top