ನವದೆಹಲಿ: ಐಐಟಿ-ಬಿಎಚ್ಯು ವಿಜ್ಞಾನಿಗಳು ತೇಗ ಮತ್ತು ಬೇವಿನ ಮರದಿಂದ ತಯಾರಿಸಿದ ಬೂದಿಯನ್ನು ಬಳಸಿ ನೀರಿನಿಂದ ವಿಷಕಾರಿ ವಸ್ತುಗಳನ್ನು ಹೊರತೆಗೆಯುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ವಿಧಾನವು ಪರಿಸರ ಸ್ನೇಹಿ ಮಾತ್ರವಲ್ಲದೆ, ಅಗ್ಗವಾಗಿದೆ. ನೀರಿನಲ್ಲಿ ಲಭ್ಯವಿರುವ ಖನಿಜಗಳನ್ನು ಉಳಿಸಿಕೊಂಡು ಆರ್ಒಗಳ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಗಂಗಾ ನೀರನ್ನು ಶುದ್ಧೀಕರಿಸಲು ಸಹ ಇದನ್ನು ಅಳವಡಿಸಿಕೊಳ್ಳಬಹುದು.
ಬಯೋಕೆಮಿಕಲ್ ಎಂಜಿನಿಯರಿಂಗ್ನ ಸಹಾಯಕ ಪ್ರಾಧ್ಯಾಪಕ ವಿಶಾಲ್ ಮಿಶ್ರಾ ಮತ್ತು ಅವರ ತಂಡವು ತೇಗದ ಮರದ ಪುಡಿ ಮತ್ತು ಬೇವಿನ ಕಾಂಡದ ಭಸ್ಮದಿಂದ ಎರಡು ವಿಭಿನ್ನ ರೀತಿಯ ಆಡ್ಸರ್ಬೆಂಟ್ ಅನ್ನು ಸಿದ್ಧಪಡಿಸಿದೆ, ಇದರಿಂದ ಹಾನಿಕಾರಕ ಲೋಹಗಳು, ಅಯಾನುಗಳನ್ನು ನೀರಿನಿಂದ ಬೇರ್ಪಡಿಸಬಹುದು.
ಇತ್ತೀಚಿನ ವರ್ಷಗಳಲ್ಲಿ, ಹೊರಹೀರುವಿಕೆಯನ್ನು ಇತರ ರಾಸಾಯನಿಕ ತಂತ್ರಗಳಿಗಿಂತ ಅಗ್ಗದ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ ಎಂದು ವಿಶಾಲ್ ಮಿಶ್ರಾ ಅವರು ಹೇಳಿದ್ದಾರೆ.
ಇದಕ್ಕೆ ಕಡಿಮೆ ಖರ್ಚಾಗುತ್ತದೆ ಮತ್ತು ನೀರಿನಿಂದ ಹರಡುವ ರೋಗಗಳ ತಡೆಗಟ್ಟುವಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ತೇಗದ ಮರದ ಪುಡಿಯನ್ನು (ವೈಜ್ಞಾನಿಕ ಹೆಸರು: ಟೆಕ್ಟೋನಾ ಗ್ರ್ಯಾಂಡಿಸ್) ಸೋಡಿಯಂ ಥಿಯೋಸಲ್ಫೇಟ್ ನೊಂದಿಗೆ ಬೆರೆಸಿ ಸಾರಜನಕದ ವಾತಾವರಣದಲ್ಲಿ ಬಿಸಿ ಮಾಡಿ ಸಕ್ರಿಯ ಇದ್ದಿಲು ತಯಾರಿಸಲಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.
ಅಲ್ಲದೆ, ಆಡ್ಸರ್ಬೆಂಟ್ ಅನ್ನು ಬೇವಿನ (ವೈಜ್ಞಾನಿಕ ಹೆಸರು: ಆಜಾದಿರಚ್ಟ್ಟಾ ಇಂಡಿಕಾ) ಮತ್ತು ಕಾಂಡದ ಬೂದಿ (ಬೇವಿನ ರೆಂಬೆ ಬೂದಿ) ಯಿಂದ ಕೂಡ ತಯಾರಿಸಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.