News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼದೇಖೋ ಅಪ್ನಾ ದೇಶ್ʼ ಅಡಿಯಲ್ಲಿ ಮಧುರೈ ದೇಗುಲದ ಬಗೆಗಿನ ವೆಬಿನಾರ್‌ ಆಯೋಜನೆ

ಚೆನ್ನೈ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ದೇಖೋ ಅಪ್ನಾ ದೇಶ್ ಅಡಿಯಲ್ಲಿ  ವೆಬಿನಾರ್ ಸರಣಿಯನ್ನು ಆಯೋಜಿಸುತ್ತಾ ಬರುತ್ತಿದೆ. ಈ ‌ ಸರಣಿಯ  82 ನೇ ವೆಬಿನಾರ್‌ನಲ್ಲಿ  “ಸ್ಟೋರೀಸ್ ಆಫ್ ಮಧುರೈ” ಎಂಬ ಶೀರ್ಷಿಕೆಯೊಂದಿಗೆ ಮಾರ್ಚ್ 30ರಂದು ವೆಬಿನಾರ್ ಅನ್ನು‌ ಆಯೋಜನೆಗೊಳಿಸಲಾಗಿತ್ತು.

ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ತಮಿಳುನಾಡಿನ ಮಧುರೈ ಭವ್ಯವಾದ  ದೇವಾಲಯಗಳಲ್ಲಿನ್ನು ಹೊಂದಿದೆ. ದೇಶದ ವಾಸ್ತುಶಿಲ್ಪದ ಅತ್ಯಂತ ವಿಸ್ಮಯಕಾರಿ ಮಾದರಿಗಳು ಈ ದೇಗುಲದಲ್ಲಿ ಕಾಣ ಸಿಗುತ್ತದೆ. ಇವುಗಳಲ್ಲಿ ಅತ್ಯಂತ ಅದ್ಭುತವಾದದ್ದು  ಸಾವಿರಾರು ಭಕ್ತರು ಭೇಟಿ ನೀಡುವ ಮೀನಾಕ್ಷಿ-ಸುಂದರೇಶ್ವರ ದೇವಸ್ಥಾನ. ಈ ದೇಗುಲದ ಇತಿಹಾಸವನ್ನು ಸಾರುವ ವೆಬಿನಾರ್‌ ಅನ್ನು ಆಯೋಜನೆ ಮಾಡಲಾಗಿತ್ತು.

ಭಾರತದ ಅತಿದೊಡ್ಡ ದೇವಾಲಯ ಸಂಕೀರ್ಣಗಳಲ್ಲಿ ಒಂದಾದ ಶ್ರೀ ಮೀನಾಕ್ಷಿ-ಸುಂದರೇಶ್ವರ ದೇವಸ್ಥಾನವು ಮಧುರೈನ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ತಾಣವಾಗಿದೆ. ಇದರ ಬಗೆಗಿನ ವೆಬಿನಾರ್ ಅನ್ನು ಪ್ರಸಿದ್ಧ ಸ್ಟೋರಿ ಟೆಲ್ಲರ್, ಹಿರಿಯ ಸಂಶೋಧಕಿ ಅಕಿಲಾ ರಾಮನ್ ಅವರು ಪ್ರಸ್ತುತಪಡಿಸಿದರು. ಇವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ವಿವಿಧ ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳ ಸಂಗ್ರಾಹಕರಾಗಿದ್ದಾರೆ.

ದೇಖೋ ಅಪ್ನಾ ದೇಶ್ ವೆಬಿನಾರ್ ಸರಣಿಯು ಏಕ್ ಭಾರತ್ ಶ್ರೇಷ್ಠ ಭಾರತ್  ಅಡಿಯಲ್ಲಿ ಭಾರತದ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸುವ ಪ್ರಯತ್ನವಾಗಿದೆ. ಈ ವೆಬಿನಾರ್ ಸರಣಿಯನ್ನು ರಾಷ್ಟ್ರೀಯ ಇ ಆಡಳಿತ ಇಲಾಖೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ತಾಂತ್ರಿಕ ಸಹಭಾಗಿತ್ವದಲ್ಲಿ ಪ್ರಸ್ತುತಪಡಿಸಿದೆ. ವೆಬಿನಾರ್ ಸೆಷನ್‌ಗಳು ಈಗ https://www.youtube.com/channel/UCbzIbBmMvtvH7d6Zo_ZEHDA/ ಅಲ್ಲಿ ಲಭ್ಯವಿದೆ ಮತ್ತು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top