ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಂಪರ್ಕವನ್ನು ವೃದ್ಧಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನಗಳು ನಡೆಯುತ್ತಿದೆ, ಸರ್ಕಾರಿ ಸ್ವಾಮ್ಯದ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ಈ ಕೇಂದ್ರಾಡಳಿ ಪ್ರದೇಶಕ್ಕೆ 150 ಟನ್ಗಳಷ್ಟು ತೂಕದ ಸರಕು ಹಡಗನ್ನು ಪೂರೈಸಿದೆ. 500 ಪ್ರಯಾಣಿಕರನ್ನು ಸಾಗಿಸುವಷ್ಟು ಸಾಮರ್ಥ್ಯವನ್ನು ಈ ಸರಕು ಹಡಗು ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಸಾರಿಗೆ ಪಡೆಗೆ ಹೊಸ ಹಡಗುಗಳನ್ನು ಸೇರಿಸಲು ಸರ್ಕಾರವು ಮುಂದಾಗಿರುವ ಭಾಗವಾಗಿ ಈ ಸರಕು ಹಡಗನ್ನು ಪೂರೈಕೆ ಮಾಡಲಾಗಿದೆ, ಇದು ಮೇನ್ಲ್ಯಾಂಡ್ ಮತ್ತು ಗ್ರೂಪ್ ಐಸ್ಲ್ಯಾಂಡ್ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.
1,400 ಕೋಟಿ ರೂ.ಗಳ ಮೌಲ್ಯದಲ್ಲಿ “ಮೇಕ್ ಇನ್ ಇಂಡಿಯಾ” ಉಪಕ್ರಮದಡಿ ಅಂಡಮಾನ್ ಮತ್ತು ನಿಕೋಬಾರ್ಗೆ ಒಟ್ಟು ನಾಲ್ಕು ಪ್ರಯಾಣಿಕ ಹಡಗುಗಳನ್ನು ಅರ್ಪಿಸಲು ಸರ್ಕಾರ ಯೋಜಿಸಿದೆ. 500 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವಿರುವ ಮತ್ತೊಂದು ಹಡಗು ಪ್ರಸ್ತುತ ನಿರ್ಮಾಣದ ಮುಂದುವರಿದ ಹಂತದಲ್ಲಿದೆ. ಪ್ರಸಕ್ತ ವರ್ಷದಲ್ಲಿಯೇ ಈ ಹಡಗು ಸಾರಿಗೆ ಪಡೆಗೆ ಸೇರುವ ಸಾಧ್ಯತೆಯಿದೆ. ಇದಲ್ಲದೆ, ಇತರ ಎರಡು ಹಡಗುಗಳು ತಲಾ 1,200 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರಲಿವೆ.
ಇದಲ್ಲದೆ, ಸಂಪರ್ಕವನ್ನು ಸುಧಾರಿಸಲು ಅಂಡಮಾನ್ ಮತ್ತು ನಿಕೋಬಾರ್ಗೆ ಸುಮಾರು 3,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಸೇತುವೆಗಳು ಮತ್ತು ರಸ್ತೆಗಳನ್ನು ನಿರ್ಮಿಸಲು ಸರ್ಕಾರವು ಸರ್ಕಾರಿ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್ಎಚ್ಐಡಿಸಿಎಲ್) ಗೆ ಜವಾಬ್ದಾರಿ ನೀಡಿದೆ ಎಂಬುದು ಗಮನಾರ್ಹ.
ದ್ವೀಪಗಳು ಭಾರತದ ಏಕೈಕ ತ್ರಿ-ಸೇವಾ ಕಮಾಂಡ್ಗೆ ನೆಲೆಯಾಗಿರುವುದರಿಂದ ಈ ಬೆಳವಣಿಗೆಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಇದು ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗವಾದ ಮಲಕ್ಕಾ ಜಲಸಂಧಿಯ ಪ್ರವೇಶದ್ವಾರದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.