ಢಾಕಾ: ಬಾಂಗ್ಲಾದೇಶ ಪ್ರವಾಸದ ಎರಡನೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಸತ್ಖಿರಾ ಜಿಲ್ಲೆಯ ಈಶ್ವರಿಪುರದ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ದೇವಿಗೆ ಕೈಯಿಂದ ವಿನ್ಯಾಸಪಡಿಸಿದ ಚಿನ್ನದ ಲೇಪಿತ ಬೆಳ್ಳಿ ಕಿರೀಟವನ್ನು ಅರ್ಪಿಸಿದರು.
“ಇಂದು, ಮಾತೆ ಕಾಳಿಗೆ ನಮಸ್ಕರಿಸಲು ಈ ಶಕ್ತಿಪೀಠಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಮಾನವ ಜನಾಂಗವನ್ನು ಕೋವಿಡ್-19 ನಿಂದ ಮುಕ್ತಗೊಳಿಸುವಂತೆ ನಾನು ಅವಳನ್ನು ಪ್ರಾರ್ಥಿಸಿದೆ ” ಎಂದು ಮೋದಿ ಹೇಳಿದ್ದಾರೆ.
“ಕಾಳಿ ಪೂಜೆಯ ಸಮಯದಲ್ಲಿ ಹಲವಾರು ಭಕ್ತರು ಇಲ್ಲಿಗೆ ಬರುತ್ತಾರೆ. ಆದ್ದರಿಂದ ಇಲ್ಲಿ ಬಹುಪಯೋಗಿ ಸಮುದಾಯ ಭವನ ಬೇಕಾಗುತ್ತದೆ, ಇದು ಯಾವುದೇ ಅನಾಹುತದ ಸಂದರ್ಭದಲ್ಲಿ, ವಿಶೇಷವಾಗಿ ಚಂಡಮಾರುತದ ಸಮಯದಲ್ಲಿ ಆಶ್ರಯ ಮನೆಯಾಗಬಹುದು. ಭಾರತ ಸರ್ಕಾರವು ಇಲ್ಲಿ ಸಮುದಾಯ ಭವನವನ್ನು ನಿರ್ಮಿಸುತ್ತದೆ. ಬಾಂಗ್ಲಾದೇಶ ಸರ್ಕಾರವು ಈ ಕಾರ್ಯಕ್ಕಾಗಿ ನಮಗೆ ಶುಭ ಹಾರೈಸಿದ್ದು, ಇದಕ್ಕಾಗಿ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ” ಎಂದು ಮೋದಿ ಹೇಳಿದ್ದಾರೆ.
“ಚೈತ್ರ ನವರಾತ್ರಿಯ ಮುನ್ನ, 51 ಶಕ್ತಿಪೀಠಗಳಲ್ಲಿ ಒಂದನ್ನು ಭೇಟಿ ಮಾಡುವ ಅವಕಾಶ ನನಗೆ ದೊರಕಿತು. ನಾನು 2015 ರಲ್ಲಿ ಬಾಂಗ್ಲಾದೇಶಕ್ಕೆ ಬಂದಾಗ ಮಾತೆ ಧಕೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದೆ. ಇಂದು, ಮಾತೆ ಕಾಳಿಯ ಮುಂದೆ ತಲೆ ಬಾಗಿಸುವ ಅದೃಷ್ಟ ನನ್ನದಾಯಿತು. ಅವಕಾಶ ಸಿಕ್ಕರೆ ಎಲ್ಲಾ ಶಕ್ತಿಪೀಠಗಳನ್ನು ಭೇಟಿ ಮಾಡಲು ಬಯಸುತ್ತೇನೆ” ಎಂದು ಮೋದಿ ಹೇಳಿದರು.
PM @narendramodi offers prayers at Jeshoreshwari Kali temple,#Bangladesh. pic.twitter.com/8V6cKGfimz
— All India Radio News (@airnewsalerts) March 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.