ಜೈಪುರ: ರಾಜಸ್ಥಾನದ ಪಶುಸಂಗೋಪನೆ ಮತ್ತು ಡೈರಿ ಇಲಾಖೆ ಕೋಟ್ಯಂತರ ರೂಪಾಯಿ ಮೌಲ್ಯದ ಗೋಶಾಲೆ ಹಗರಣವನ್ನು ಪತ್ತೆ ಮಾಡಿದೆ. ವರದಿಗಳ ಪ್ರಕಾರ, ಜೈಸಲ್ಮೇರ್ನಲ್ಲಿ ನಡೆದ ಪರಿಶೀಲನಾ ಕಾರ್ಯದಲ್ಲಿ, 25 ಗೋ ಆಶ್ರಯಗಳಲ್ಲಿ 12 ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ತೆಗೆದುಕೊಳ್ಳುತ್ತಿರುವುದನ್ನು ಇಲಾಖೆ ಕಂಡುಹಿಡಿದಿದೆ, ಆದರೆ ಅವುಗಳಲ್ಲಿ ಒಂದು ಹಸು ಕೂಡ ಇರಲಿಲ್ಲ. ಪ್ರಕರಣದ ಬಗ್ಗೆ ಇಲಾಖೆ ತನಿಖೆ ಆರಂಭಿಸಿದೆ.
ವರದಿಯ ಪ್ರಕಾರ, ಒಂದು ಹಸು ಸಹ ಪತ್ತೆಯಾಗದ 12 ಗೋ ಆಶ್ರಯಗಳ ನಿರ್ದೇಶಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಅನುದಾನ ಪಡೆಯುತ್ತಿದ್ದರು. ಈ 12 ರಲ್ಲಿ ಆರು ಮಂದಿ ತಮ್ಮಲ್ಲಿ 1814 ಹಸುಗಳನ್ನು ಇವೆ ಎಂದು ಸುಳ್ಳು ವರದಿ ಸೃಷ್ಟಿಸಿದ್ದರು. ಅಲ್ಲದೇ ಕಳೆದ ವರ್ಷ 62 ಲಕ್ಷ ರೂ. ಅನುದಾನ ಪಡೆದಿದ್ದರು.
ಇದೀಗ ಇಲಾಖೆ ಎಲ್ಲಾ ಗೋ ಆಶ್ರಯಗಳಿಗೆ ನೋಟಿಸ್ ನೀಡಿದ್ದು, ವಿವರಣೆ ಕೋರಿದೆ.
ವರದಿಗಳ ಪ್ರಕಾರ, ಹೆಚ್ಚಿನ ಗೋ ಆಶ್ರಯಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದೆ ಎಂದು ಇಲಾಖೆ ಕಂಡುಹಿಡಿದಿದೆ. ನಿಯಮಗಳ ಪ್ರಕಾರ, ಎಲ್ಲಾ ಗೋ ಆಶ್ರಯಗಳಲ್ಲಿ ನೆರಳು, ಆಹಾರ ಮತ್ತು ನೀರಿಗಾಗಿ ಒಂದು ವ್ಯವಸ್ಥೆ ಇರಬೇಕು. ಈ ಗೋ ಆಶ್ರಯಗಳನ್ನು ಹಳೆಯ, ಅನಾರೋಗ್ಯ ಮತ್ತು ದಾರಿತಪ್ಪಿ ಹಸುಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಇಲಾಖೆಗೆ ಕೇವಲ ನಾಲ್ಕು ಆಶ್ರಯಗಳಲ್ಲಿ ಸರಿಯಾದ ಸೌಲಭ್ಯಗಳನ್ನು ಕಂಡುಹಿಡಿಯಲು ಸಾಧ್ಯವಾಗಿದೆ. 20 ಆಶ್ರಯಗಳಲ್ಲಿ, ನೆರಳಿನ ವ್ಯವಸ್ಥೆ ಕೂಡ ಇರಲಿಲ್ಲ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.