ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದ್ನ ಸಬರಮತಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು ಮತ್ತು ದಂಡಿ ಯಾತ್ರೆ ಸ್ಮರಣಾರ್ಥ ಪಾದಾಯಾತ್ರೆಗೆ ಚಾಲನೆಯನ್ನು ನೀಡಿದರು. ಅದಕ್ಕೂ ಮೊದಲು ಪ್ರಧಾನಿ ಮಹಾತ್ಮ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂದರೆ ಸ್ವಾತಂತ್ರ್ಯ ಶಕ್ತಿಯ ಅಮೃತ, ಸ್ವಾತಂತ್ರ್ಯ ಸೇನಾನಿಗಳ ಸ್ಫೂರ್ತಿಯ ಅಮೃತ, ಹೊಸ ಆಲೋಚನೆಗಳ ಅಮೃತ, ಹೊಸ ನಿರ್ಣಯಗಳ ಅಮೃತ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂದರೆ ಸ್ವಾವಲಂಬನೆಯ ಅಮೃತ” ಎಂದಿದ್ದಾರೆ.
“ಭಾರತದ ಬಳಿ ಹೆಮ್ಮೆ ಪಡುವಂತಹ ಅಪಾರ ಸಮೃದ್ಧಿ, ಶ್ರೀಮಂತ ಇತಿಹಾಸ, ಪ್ರಜ್ಞಾಪೂರ್ವಕ ಸಾಂಸ್ಕೃತಿಕ ಪರಂಪರೆಯೇ ಇದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಉಪ್ಪು ಭಾರತದ ಸ್ವಾವಲಂಬನೆಯ ಸಂಕೇತವಾಗಿತ್ತು. ಬ್ರಿಟಿಷರು ಭಾರತದ ಮೌಲ್ಯಗಳ ಜೊತೆಗೆ, ಸ್ವಾವಲಂಬನೆಗೂ ಧಕ್ಕೆ ತಂದಿದ್ದರು. ಭಾತೀಯರು ಇಂಗ್ಲೆಂಡ್ನಿಂದ ಬರುವ ಉಪ್ಪನ್ನು ಅವಲಂಬಿಸಬೇಕಾಗಿತ್ತು. ಗಾಂಧೀಜಿಯವರು ದೇಶದ ಈ ನೋವನ್ನು ಅರ್ಥಮಾಡಿಕೊಂಡು ಉಪ್ಪಿನ ಆಂದೋಲನ ಆರಂಭಿಸಿದರು, ಇದು ಪ್ರತಿಯೊಬ್ಬ ಭಾರತೀಯರ ಆಂದೋಲನವಾಯಿತು” ಎಂದರು.
“ನಾವು ಭಾರತೀಯರು ದೇಶದಲ್ಲೇ ಅಥವಾ ವಿದೇಶದಲ್ಲೇ ವಾಸಿಸುತ್ತಿರಲಿ, ನಮ್ಮ ಕಠಿಣ ಪರಿಶ್ರಮದಿಂದ ನಾವು ನಮ್ಮನ್ನು ಸಾಬೀತುಪಡಿಸಿದ್ದೇವೆ. ನಮ್ಮ ಸಂವಿಧಾನದ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.