ಮಂಗಳೂರು: ರಾಜ್ಯದ ಏಕೈಕ ತೋಟಗಾರಿಕಾ ವಿಶ್ವವಿದ್ಯಾಲಯವಾದ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯವು ದೇಶದ ಪ್ರತಿಷ್ಠಿತ ವಿ.ವಿ.ಯಲ್ಲಿ ಒಂದಾಗಿದ್ದು, ಇತ್ತೀಚೆಗೆ ಇದು ಭ್ರಷ್ಟ ಹಾಗೂ ಅಕ್ರಮ ನೇಮಕಾತಿಯ ತೋಟಗಾರಿಕಾ ಅಕ್ರಮ ವಿ.ವಿ.ಯಾಗಿ ಪರಿಣಮಿಸಿದೆ. ಬಾಗಲಕೋಟೆಯ ತೋಟಗಾರಿಕ ವಿ.ವಿ.ಯಲ್ಲಿ ಅರ್ಹರಲ್ಲದ ವ್ಯಕ್ತಿಗಳನ್ನು ವಿ.ವಿ.ಯ ನಿಯಮಾವಳಿಗಳನ್ನು ಹಾಗೂ ಯು.ಜಿ.ಸಿ ನಿಯಮಗಳನ್ನು ಮನಬಂದಂತೆ ನೇಮಕಾತಿ ನಡೆಸಿರುವುದಕ್ಕೆ ಅ.ಭಾ.ವಿ.ಪ. ತೀವ್ರವಾಗಿ ಖಂಡಿಸಿದೆ.
ವಿ.ವಿ.ಯ ಕುಲಪತಿಗಳ ನೇಮಕದಿಂದ ಪ್ರಾರಂಭವಾದ ಭ್ರಷ್ಟಾಚಾರ ಕಳೆದ ತಿಂಗಳು ನೇಮಕವಾದ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ನೇಮಕಾತಿಯಲ್ಲಿ ಭ್ರಷ್ಟಾಚಾರವಾಗಿರುವುದು ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ. ವಿ.ವಿ.ಯೇ ಅರ್ಹ ಮತ್ತು ಅನರ್ಹ ಅಭ್ಯರ್ಥಿಗಳು ಎಂದು ಪಟ್ಟಿಮಾಡಿ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು. ಈ ರೀತಿಯ ಪಟ್ಟಿ ಮಾಡಿರುವುದೇ ಹಲವು ಗೊಂದಲಗಳನ್ನು ಸೃಷ್ಟಿಸಿದೆ. ವಿ.ವಿ.ಯು ಸಂದರ್ಶನದ ವೇಳೆ ಅನರ್ಹ ಪಟ್ಟಿಯಲ್ಲಿರುವ 12ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ನೇಮಕ ಮಾಡಿಕೊಂಡು ದೊಡ್ಡ ಅಕ್ರಮ ನಡೆಸಿತ್ತು.
ವಿ.ವಿ.ಯಲ್ಲಿ ನೇಮಕವಾಗಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಪ್ರಮಾಣ ಪತ್ರದ ಮೇಲೆ ಹಲವು ಅನುಮಾನಗಳಿವೆ ಹಾಗೂ ಅನೇಕ ಅಭ್ಯರ್ಥಿಗಳು ಹೊರ ರಾಜ್ಯದ ಮುಕ್ತ ವಿ.ವಿ.ಗಳಲ್ಲಿ ಪದವಿ ಪಡೆದವರನ್ನು ನೇಮಕ ಮಾಡಿಕೊಂಡು ಯು.ಜಿ.ಸಿ ನಿಯಮಗಳನ್ನು ಗಾಳಿಗೆ ತೂರಿದೆ. ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಯು.ಜಿ.ಸಿ ಯಿಂದ ಮಾನ್ಯತೆ ಪಡೆಯದ ವಿ.ವಿ.ಗಳಲ್ಲಿ ಪದವಿ ಪಡೆದಿರುವುದು ಗುಮಾನಿಯು ವ್ಯಕ್ತವಾಗುತ್ತಿದೆ. ವಿ.ವಿ.ಯು ಅರ್ಹ ಮತ್ತು ಅನರ್ಹ ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಗಳನ್ನು ಹಾಗೂ ಕಡಿಮೆ ಅಂಕಗಳನ್ನು ಪಡೆದಿರುವ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಆದ್ದರಿಂದ ಈಗ ನೇಮಕವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ರದ್ದುಗೊಳಿಸಿ ಪುನಃ ಹೊಸ ನೇಮಕಾತಿ ಮಾಡಿಕೊಳ್ಳಬೇಕೆಂದು ಅಭಾವಿಪ ಆಗ್ರಹಿಸಿದೆ.
ಇದರ ಜೊತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ದೇಶದಲ್ಲಿ ಹಲವಾರು ಸಂಶೋದನೆಗಳಿಗೆ ಹೆಸರಾಗಿತ್ತು. ಆದರೆ ಪ್ರಸ್ತುತ 2014-15ನೇ ಸಾಲಿನ ವಿದ್ಯಾರ್ಥಿಗಳಿಗೆ ನಡೆದ ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ನ ವಿದ್ಯಾರ್ಥಿಗಳ ಗೊಂದಲದಿಂದಾಗಿ ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭಾರೀ ಸಮಸ್ಯೆ ಉಂಟಾಗಿದ್ದು, ಇದನ್ನು ಅ.ಭಾ.ವಿ.ಪ. ಖಂಡಿಸುತ್ತದೆ.
ಪ್ರಸ್ತುತ 2014-15ನೇ ಸಾಲಿನ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮವನ್ನು ಜಾರಿಗೆ ತಂದು ಆ ಮೂಲಕ ವಿದ್ಯಾರ್ಥಿಗಳಿಗೆ ಈ ಹಿಂದೆ ಇದ್ದಂತಹ ಅವಕಾಶಗಳನ್ನು ಕಡಿತಗೊಳಿಸುವ ಮೂಲಕ ಸಮಸ್ಯೆ ಸೃಷ್ಟಿಸಿದ್ದು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈ ಬಾರಿ ಪ್ರಥಮ ವರ್ಷದ ಪರೀಕ್ಷೆಯನ್ನು ಬರೆದಿರುವ ಸಾವಿರಾರು ವಿದ್ಯಾರ್ಥಿಗಳು ನಾಲ್ಕಕ್ಕಿಂತ ಹೆಚ್ಚು ವಿಷಯಗಳನ್ನು ಅನುತ್ತೀರ್ಣರಾಗಿದ್ದು, ಒಂದು ವರ್ಷ ತಮ್ಮ ವಿದ್ಯಾರ್ಥಿ ಜೀವನವನ್ನು ವ್ಯಯ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಪ್ರಾಯೋಗಿಕವಾಗಿ ವಿ.ಟಿ.ಯು ಜಾರಿಗೆ ತಂದಿರುವ ಹೊಸ ಪಠ್ಯಕ್ರಮದಲ್ಲಿ ಈ ಪ್ರಯೋಗ ವಿಫಲವಾಗಿದೆ.
ಈ ನಿರ್ಧಾರದಿಂದ ವಿದ್ಯಾರ್ಥಿಗಳು ಅಂತಂತ್ರರಾಗಿದ್ದಾರೆ. ಹಾಗಾಗಿ ವಿ.ಟಿ.ಯು ಈ ನಿರ್ಧಾರದಿಂದ ಹಿಂದೆ ಸರಿದು, ಅರ್ಹತೆಯ ಮಾನದಂಡವನ್ನು ಸಡಿಲಿಸಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ ವ್ಯಾಸಾಂಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.