ಬಾರಾಮುಲ್ಲಾ: ಜವಾನ್ ಮತ್ತು ಅವಮ್ ( ಯೋಧರು ಮತ್ತು ಜನರು) ನಡುವಿನ ಅಂತರವನ್ನು ನಿವಾರಿಸಲು ಭಾರತೀಯ ಸೇನೆಯು ತನ್ನ ಮೊದಲ ಸಮುದಾಯ ರೇಡಿಯೋ ಕೇಂದ್ರ ‘ರೇಡಿಯೋ ಚಿನಾರ್’ ಅನ್ನು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ನಲ್ಲಿ ಶನಿವಾರ ಪ್ರಾರಂಭಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೇನೆಯ ಕೋರ್ ಕಮಾಂಡರ್ ಎಲ್.ಟಿ ಜನರಲ್ ಬಿ.ಎಸ್.ರಾಜು, “ಈ ಹೊಸ ಉಪಕ್ರಮದ ಮುಖ್ಯ ಉದ್ದೇಶ ಸ್ಥಳೀಯ ಯುವ ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವುದಾಗಿದೆ. ದೂರದ ಭಾಗಗಳಲ್ಲಿ ವಾಸಿಸುವ ಜನರನ್ನು ತಲುಪುವ ಸಾಮರ್ಥ್ಯವನ್ನು ರೇಡಿಯೋ ಹೊಂದಿದೆ ಮತ್ತು ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅರಿವು ಮೂಡಿಸುತ್ತದೆ” ಎಂದಿದ್ದಾರೆ.
ರೇಡಿಯೋ ಕೇಂದ್ರವು ಉತ್ತರ ಕಾಶ್ಮೀರದ ಸುತ್ತಲೂ ಪ್ರಸಾರವನ್ನು ಹೊಂದಿರುತ್ತದೆ. ಇದು 90.4 FM MHz ಆವರ್ತನದಲ್ಲಿ ಲಭ್ಯವಿರುತ್ತದೆ. ಈ ಸೇವೆ ಬಾರಾಮುಲ್ಲಾ ಜಿಲ್ಲೆ ಮತ್ತು ಉತ್ತರ ಕಾಶ್ಮೀರದ ಇತರ ಭಾಗಗಳಲ್ಲಿ ಲಭ್ಯವಿರುತ್ತದೆ.
“ಸಮುದಾಯ ರೇಡಿಯೋ ಕೇಂದ್ರವು ಪ್ರಾಥಮಿಕವಾಗಿ ಬೆಳಿಗ್ಗೆ ಸೂಫಿ ಹಾಡುಗಳಿಂದ ಪ್ರಾರಂಭವಾಗುವ ಎಲ್ಲಾ ಪ್ರಕಾರದ ಹಾಡುಗಳನ್ನು ನುಡಿಸುತ್ತದೆ ಮತ್ತು ನಂತರ ಹಿಂದಿ ಮತ್ತು ಪಂಜಾಬಿ ಮುಂತಾದ ಹಾಡುಗಳನ್ನು ಪ್ರಸಾರ ಮಾಡುತ್ತದೆ” ಎಂದು ರೇಡಿಯೋ ಜಾಕಿ ಸಾಜಿದ್ ಅಹ್ಮದ್ ಹೇಳಿದ್ದಾರೆ.
ಭಾರತೀಯ ಸೈನ್ಯದ ಈ ಉಪಕ್ರಮವನ್ನು ನಿವಾಸಿಗಳು ಮತ್ತು ಸ್ಥಳೀಯ ಕೌನ್ಸಿಲರ್ಗಳು ಶ್ಲಾಘಿಸಿದ್ದರೆ. ಇದು “ಜವಾನ್ ಮತ್ತು ಅವಮ್ ನಡುವಿನ ಅಂತರವನ್ನು ಕಡಿಮೆ ಮಾಡಲು” ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.