ನವದೆಹಲಿ: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯ ಅಂಗವಾಗಿ ನವ ದೆಹಲಿಯಲ್ಲಿಂದು ಆಯೋಜಿಸಲಾಗಿದ್ದ ‘ಸಮರ್ಪಣಾ ದಿವಸ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಜನ ಸಂಘದ ಮಾಜಿ ನಾಯಕನಾಗಿದ್ದ ಪಂಡಿತ್ ಅವರು ಸ್ಥಳೀಯ ಉತ್ಪಾದನೆ ಮತ್ತು ಉತ್ಪನ್ನವನ್ನು ಬಲಪಡಿಸುವಂತೆ ಭಾರತಕ್ಕೆ ಕರೆ ನೀಡಿದ್ದನ್ನು ನೆನಪಿಸಿಕೊಂಡರು. ‘ಸ್ಥಳೀಯತೆಗೆ ಧ್ವನಿಯಾಗೋಣʼ ಎಂಬ ಘೋಷಣೆಗೆ ಇದುವೇ ನಾಂದಿ ಹಾಡಿತು ಎಂದಿದ್ದಾರೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ, 1965 ರ ಯುದ್ಧದ ಸಮಯದಲ್ಲಿ ಭಾರತವು ಕೃಷಿಯಲ್ಲಿ ಮಾತ್ರವಲ್ಲ, ರಕ್ಷಣಾ ಮತ್ತು ಶಸ್ತ್ರಾಸ್ತ್ರಗಳಲ್ಲೂ ಸ್ವಾವಲಂಬಿಯಾಗಿರಬೇಕು ಎಂದು ದೀನ್ ದಯಾಲ್ ಉಪಾಧ್ಯಾಯ ಅವರು ನೀಡಿದ್ದ ಕರೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಪ್ರಸ್ತುತ ಭಾರತವು ರಕ್ಷಣಾ ಕಾರಿಡಾರ್ಗಳನ್ನು ನಿರ್ಮಾಣ ಮಾಡುತ್ತಿದೆ ಮತ್ತು ತೇಜಸ್ ಮತ್ತು ಇತರ ದೇಶೀಯ ಶಸ್ತ್ರಾಸ್ತ್ರ, ಫೈಟರ್ ಜೆಟ್ಗಳನ್ನು ಉತ್ಪಾದಿಸುತ್ತಿದೆ ಎಂದರು.
ಬಿಜೆಪಿ ಪಕ್ಷವು ಯಾವಾಗಲೂ ರಾಷ್ಟ್ರ ನೀತಿಯನ್ನು ರಾಜಕೀಯ ನೀತಿಗಿಂತ ಮೇಲಿರಿಸುತ್ತದೆ ಮತ್ತು ರಾಜಕೀಯ ಪ್ರತಿಸ್ಪರ್ಧಿಗಳಿಗೂ ಗೌರವವನ್ನು ನೀಡುತ್ತದೆ ಎಂದಿದ್ದಾರೆ.
ಇದಲ್ಲದೆ, “ದೀನ ದಯಾಲ್ ಉಪಾಧ್ಯಾಯ ಯಾವಾಗಲೂ ನಮಗೆ ಸ್ಫೂರ್ತಿ ಅವರ ವಿಚಾರಗಳು ಇಂದಿನ ಕಾಲದಲ್ಲಿಯೂ ಸಹ ಪ್ರಸ್ತುತವಾಗಿವೆ ಮತ್ತು ಭವಿಷ್ಯದಲ್ಲಿಯೂ ಸಹ ಇದು ಮುಂದುವರಿಯುತ್ತದೆ. ಮಾನವೀಯತೆಯ ಕಲ್ಯಾಣಕ್ಕೆ ಸಂಬಂಧಿಸಿದಂತೆ ಅವರ ಸಮಗ್ರ ಮಾನವ ತತ್ವವು ಪ್ರಸ್ತುತವಾಗಿರುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.