ಹೈದರಾಬಾದ್: ಆಕೆಯ ಹೆಸರು ಕಂಚಿ ಗಾನವ್ವ. ಅಯೋಧ್ಯೆಯಲ್ಲಿ ಅದ್ಭುತವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂಬುದೇ ಆಕೆಯನ್ನು ಪುಳಕಿತಗೊಳಿಸಿತ್ತು. ಭಕ್ತಿಯಿಂದ ಮಂದಿರ ನಿರ್ಮಾಣಕ್ಕಾಗಿ ಆಕೆ ತನ್ನಿಂದಾದ ಕೊಡುಗೆಯನ್ನು ನೀಡಲು ನಿರ್ಧರಿಸಿದ್ದಳು. ರಾಮ ಸೇವಕರು ಆಕೆಯ ಮನೆಗೆ ಭೇಟಿ ನೀಡಿದಾಗ, ಅವಳ ಬಳಿ ಕೇವಲ ರೂ 1000 ಇತ್ತು. ಅದು ಆಕೆ ತನ್ನ ವೃದ್ಧಾಪ್ಯ ಪಿಂಚಣಿಯಿಂದ ಉಳಿಸಿದ ಮೊತ್ತ. ಅವಳು ಆ ಹಣವನ್ನು ರಾಮ ಸೇವಕರಿಗೆ ಸಂತೋಷದಿಂದ ಕೊಟ್ಟು ಧನ್ಯಳಾದಳು.
ಆದರೆ ಆಕೆಗೆ ತಾನು ನೀಡಿದ ಕೊಡುಗೆಯ ಮೊತ್ತ ಅಷ್ಟೇನೂ ತೃಪ್ತಿ ತಂದಿಲ್ಲ. ಅವಳು ಕನಿಷ್ಠ ರೂ 5000 ಕೊಡುಗೆ ನೀಡಬೇಕೆಂದು ಭಾವಿಸಿದ್ದಳು. ಇದಕ್ಕಾಗಿ ಆಕೆ ಕೂಡಲೇ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೆಂಕಟಗಿರಿ ಪಟ್ಟಣಕ್ಕೆ ಹೋಗಿ ತನ್ನ ಉಂಗುರವನ್ನು ಅಡವು ಇಟ್ಟು ರೂ 4000 ಪಡೆದಳು. ನಂತರ ಅವಳು ಸಂತೋಷದಿಂದ ರಾಮ ಸೇವಕನ ಬಳಿಗೆ ಬಂದು ಆ ಮೊತ್ತವನ್ನು ಅವರಿಗೆ ಒಪ್ಪಿಸಿದಳು.
ಇದು ರಾಮ ಮಂದಿರ ನಿಧಿ ಸಮರ್ಪಣ್ ಅಭಿಯಾನದ ಭಾಗವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಜನರು ಹೆಮ್ಮೆಪಡುವ ಕ್ಷಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.