ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೈಜಾಕ್ ಮಾಡುವ ಪ್ರಯತ್ನ ನಡೆಸುತ್ತಿವೆ. ಭಾರತವನ್ನು ವಿಭಜನೆಗೊಳಿಸುವ ಅಪಾಯಕಾರಿ ಮನಸ್ಥಿತಿಯ ಜನರು ಈಗಾಗಲೇ ಪ್ರತಿಭಟನೆಯನ್ನು ಹಿಂಸಾತ್ಮಕ ರೂಪಕ್ಕೆ ತಿರುಗಿಸಿದ್ದನ್ನು ನಾವು ನೋಡಿದ್ದೇವೆ. ಇದೀಗ ಇಂತಹ ದುಷ್ಟಶಕ್ತಿಗಳು ವಿದೇಶಿ ಸೆಲೆಬ್ರಿಟಿಗಳ ಬೆಂಬಲವನ್ನು ಪಡೆದುಕೊಂಡು ಭಾರತದ ಘನತೆಗೆ ಧಕ್ಕೆ ತರುವ ಪ್ರಯತ್ನವನ್ನು ನಡೆಸುತ್ತಿವೆ. ಇಂತಹ ಜನರ ಷಡ್ಯಂತ್ರಕ್ಕೆ ತಿರುಗೇಟು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಹೇಳಿಕೆಯನ್ನು ಬಿಡುಗಡೆ ಮಾಡಿ ರೈತರ ಗೊಂದಲಗಳನ್ನು ಮಾತುಕತೆಯ ಮೂಲಕ ಸರಕಾರ ಪರಿಹರಿಸಲು ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಕೆಲವು ಶಕ್ತಿಗಳು ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸಿ ಭಾರತಕ್ಕೆ ಹಾನಿ ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದಿದೆ.
ಭಾರತ ಒಗ್ಗಟ್ಟಾಗಿ ನಿಲ್ಲುತ್ತದೆ, ಭಾರತ ಅಪಪ್ರಚಾರದ ವಿರುದ್ಧ ಇದೆ ಎಂದು ವಿದೇಶಾಂಗ ಸಚಿವಾಲಯ ದೃಢವಾಗಿ ಹೇಳಿದೆ. #IndiaTogether #IndiaAgainstPropaganda ಹ್ಯಾಶ್ಟ್ಯಾಗ್ ನೀಡಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಇದರ ಬೆನ್ನಲ್ಲೇ ಭಾರತದ ಹಲವಾರು ಮಂದಿ ಸಿನಿಮಾ ತಾರೆಯರು, ಕಲಾವಿದರು, ಸೆಲೆಬ್ರಿಟಿಗಳು ಈ ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಭಾರತ ಒಗ್ಗಟ್ಟಾಗಿರಬೇಕು ಎಂದು ಪ್ರತಿಪಾದಿಸಿದ್ದಾರೆ.
ದೇಶಭಕ್ತ ಸಿನಿಮಾ ತಾರೆ ಎಂದೇ ಖ್ಯಾತರಾಗಿರುವ ನಟ ಅಕ್ಷಯ್ ಕುಮಾರ್ ಅವರು ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಹಂಚಿಕೊಂಡು, “ರೈತರು ನಮ್ಮ ದೇಶದ ಅತ್ಯಂತ ಅಗತ್ಯ ಭಾಗವಾಗಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಭಿನ್ನಾಭಿಪ್ರಾಯ ಸೃಷ್ಟಿಸುವವರ ಬಗ್ಗೆ ಗಮನ ನೀಡುವ ಬದಲು, ಸ್ಪಷ್ಟ ಪರಿಹಾರಕ್ಕಾಗಿನ ಪ್ರಯತ್ನವನ್ನು ಬೆಂಬಲಿಸೋಣ” ಎಂದಿದ್ದಾರೆ.
ಖ್ಯಾತ ನಿರ್ದೇಶಕ ಕರಣ್ ಜೋಹರ್ ಟ್ವಿಟ್ ಮಾಡಿ, “ನಾವು ಪ್ರಕ್ಷುಬ್ಧ ಕಾಲಘಟ್ಟದಲ್ಲಿ ವಾಸಿಸುತ್ತಿದ್ದೇವೆ. ವಿವೇಕ ಮತ್ತು ತಾಳ್ಮೆಯಿಂದ ಇರುವುದು ಪ್ರಸ್ತುತ ಸಮಯದ ಅಗತ್ಯವಾಗಿದೆ. ನಾವು ಒಗ್ಗಟ್ಟಾಗಿ, ಎಲ್ಲರಿಗೂ ಪೂರಕವಾದ ಪರಿಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸೋಣ. ನಮ್ಮ ರೈತರು ಭಾರತದ ಬೆನ್ನೆಲುಬು. ನಮ್ಮನ್ನು ವಿಭಜಿಸಲು ಯಾರಿಗೂ ಅವಕಾಶ ನೀಡದಿರೋಣ” ಎಂದಿದ್ದಾರೆ.
ನಿರ್ದೇಶಕಿ ಏಕ್ತಾ ಕಪೂರ್ ಟ್ವೀಟ್ ಮಾಡಿ, “ಅಪಪ್ರಚಾರದ ವಿರುದ್ಧ ಒಗ್ಗಟ್ಟಾಗಿ ನಿಲ್ಲೋಣ. ಒಟ್ಟಾಗಿ ನಮ್ಮಿಂದ ಸಾಧ್ಯವಿದೆ, ನಮ್ಮಿಂದ ಸಾಧ್ಯ” ಎಂದಿದ್ದಾರೆ.
ನಟ ಅಜಯ್ ದೇವ್ಗನ್ ಟ್ವೀಟ್ ಮಾಡಿ, “ಭಾರತ ಮತ್ತು ಭಾರತದ ನೀತಿಗಳ ವಿರುದ್ಧದ ಯಾವುದೇ ಅಪಪ್ರಚಾರಕ್ಕೆ ಬೀಳದಿರೋಣ. ಯಾವುದೇ ಒಳಜಗಳದ ವಿರುದ್ಧ ಒಗ್ಗಟ್ಟಾಗಿ ನಿಲ್ಲುವುದು ಈಗ ಅಗತ್ಯವಾಗಿದೆ” ಎಂದಿದ್ದಾರೆ.
ಸುನಿಲ್ ಶೆಟ್ಟಿ ಟ್ವೀಟ್ ಮಾಡಿ, “ನಾವು ಯಾವತ್ತೂ ವಿಷಯಗಳ ಬಗ್ಗೆ ಸಮಗ್ರ ದೃಷ್ಟಿಯನ್ನು ಹೊಂದಿರಬೇಕು, ಅರ್ಧ ಸತ್ಯಕ್ಕಿಂತ ಅಪಾಯಕಾರಿ ಯಾವುದು ಇಲ್ಲ” ಎಂದಿದ್ದಾರೆ.
ಕೈಲಾಸ್ ಖೇರ್ ಟ್ವಿಟ್ ಮಾಡಿ, “ವೃದ್ಧಿಯಾಗುತ್ತಿರುವ ವರ್ಚಸ್ಸನ್ನು ನೋಡು ಭಾರತ, ವಿರೋಧಿಗಳು ಯಾವುದೇ ಮಟ್ಟಕ್ಕೂ ಇಳಿಯಬಲ್ಲರು. ಸಾಂಕ್ರಾಮಿಕದ ಈ ದುಃಖದ ಹಂತದಲ್ಲೂ ಭಾರತವು ಮಾನವೀಯತೆಗಾಗಿ ಎಲ್ಲಾ ದೇಶಗಳಿಗೂ ಲಸಿಕೆ ಪೂರೈಕೆ ಮಾಡುತ್ತಿದೆ. ಭಾರತ ಒಂದು ಮತ್ತು ನಾವು ಭಾರತದ ವಿರುದ್ಧದ ಪ್ರತಿಕ್ರಿಯೆಯನ್ನು ಸಹಿಸುವುದಿಲ್ಲ” ಎಂದಿದ್ದಾರೆ.
बढ़ते वर्चस्व को देख भारत विरोधी किसी भी हद तक गिर रहे. Even in this sad phase of pandemic,India is helping all nations with vaccine supply for the sake of Humanity.Let all realise that India is ONE & will not tolerate comments against it. #IndiaTogether #IndiaAgainstPropaganda
— Kailash Kher (@Kailashkher) February 3, 2021
Don’t fall for any false propaganda against India or Indian policies. Its important to stand united at this hour w/o any infighting 🙏🏼#IndiaTogether #IndiaAgainstPropaganda
— Ajay Devgn (@ajaydevgn) February 3, 2021
We live in turbulent times and the need of the hour is prudence and patience at every turn. Let us together, make every effort we can to find solutions that work for everyone—our farmers are the backbone of India. Let us not let anyone divide us. #IndiaTogether
— Karan Johar (@karanjohar) February 3, 2021
Lets stand united against any propaganda. Together we can and we will! #IndiaAgainstPropoganda #IndiaTogether https://t.co/4PhlCCowz4
— Ekta Kapoor (@ektarkapoor) February 3, 2021
Farmers constitute an extremely important part of our country. And the efforts being undertaken to resolve their issues are evident. Let’s support an amicable resolution, rather than paying attention to anyone creating differences. 🙏🏻#IndiaTogether #IndiaAgainstPropaganda https://t.co/LgAn6tIwWp
— Akshay Kumar (@akshaykumar) February 3, 2021
We must always take a comprehensive view of things, as there is nothing more dangerous than half truth. #IndiaTogether #IndiaAgainstPropaganda @hiteshjain33 https://t.co/7rNZ683ZAU
— Suniel Shetty (@SunielVShetty) February 3, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.