News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಂಚಿ ಮಠದಿಂದ ರಾಮ ಮಂದಿರ ನಿರ್ಮಾಣಕ್ಕೆ ರೂ.6 ಕೋಟಿ ದೇಣಿಗೆ ಹಸ್ತಾಂತರ

ನವದೆಹಲಿ: ರಾಮ ಜನ್ಮಭೂಮಿ ದೇಗುಲ ಟ್ರಸ್ಟ್ ಅಯೋಧ್ಯೆಯಲ್ಲಿ ಮಹತ್ವಾಕಾಂಕ್ಷೆಯ ರಾಮ ಮಂದಿರವನ್ನು 1,100 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ರಾಷ್ಟ್ರವ್ಯಾಪಿ ದೇಣಿಗೆ ಅಭಿಯಾನವನ್ನು ಪ್ರಾರಂಭಿಸಿದೆ. ಇದರಲ್ಲಿ ಮಂದಿರದ ಮುಖ್ಯ ರಚನೆಯನ್ನು ನಿರ್ಮಿಸಲು 300 ಕೋಟಿ ರೂ.ವೆಚ್ಚವಾಗಲಿದೆ. ಕಳೆದ ಆಗಸ್ಟ್‌ನಲ್ಲಿ ಭೂಮಿ ಪೂಜೆ ನಡೆಸಲಾಗಿದ್ದು, ಪ್ರಧಾನ ಮಂತ್ರಿಯವರು ಭಾರತದ ಎಲ್ಲೆಡೆಯಿಂದ ಬಂದ ಸಾಧುಗಳು ಮತ್ತು ಸಂತರ ಸಮ್ಮುಖದಲ್ಲಿ ಶಿಲಾನ್ಯಾಸ ಮಾಡಿದರು. ರಾಮ ಜನ್ಮಭೂಮಿ ತೀರ್ಥ ​​ಕ್ಷೇತ್ರ ನ್ಯಾಸ್ ಈ ಬೃಹತ್ ಕಾರ್ಯದಲ್ಲಿ ಭಾಗಿಯಾಗಿದೆ.

ರೂ. 10, 50,100,1000 ಬೆಲೆಯ ಕೂಪನ್‌ಗಳನ್ನು ದೇಣಿಗೆ‌ ಸಂಗ್ರಹಿಸಲು ಬಳಸಲಾಗುತ್ತದೆ. ದಾನ ಮಾಡಲು ಕನಿಷ್ಠ ಅಥವಾ ಗರಿಷ್ಠ ಮಿತಿಯಿಲ್ಲ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರೂ. 5 ಲಕ್ಷ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು 5 ಲಕ್ಷ ರೂ, ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಮತ್ತು ಅವರ ಪತ್ನಿ ರೂ 5,00,001, ತೆಲಂಗಾಣ ರಾಜ್ಯಪಾಲ ತಮಿಳು ಇಸಾಯಿ ಸೌಂದರಾಜನ್ ರೂ. 1 ಲಕ್ಷ, ತಮಿಳುನಾಡು ಗವರ್ನರ್ ಬನ್ವರಿಲಾಲ್ ಪುರೋಹಿತ್ ರೂ. 5,00,011 ಸೇರಿದಂತೆ ಅನೇಕರು ದೇಣಿಗೆ ನೀಡಿದ್ದಾರೆ.

ಕಾಂಚೀಪುರಂ ಶಂಕರ ಮಠದ ಪರವಾಗಿ ತಮಿಳುನಾಡು ಗವರ್ನರ್ ಬನ್ವರಿಲಾಲ್ ಪುರೋಹಿತ್ ಅವರು ಭಕ್ತರು ನೀಡಿದ 6 ಕೋಟಿ ರೂಪಾಯಿಗಳ ಕೊಡುಗೆಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಪುರೋಹಿತ್ ಅವರಿಗೆ ಫೆಬ್ರವರಿ 1 ರಂದು ಹಸ್ತಾಂತರಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಪ್ರಾಚೀನ ಶ್ರೀ ಕಾಮಾಕ್ಷಿ ಅಮ್ಮನ್ ದೇವಸ್ಥಾನ ಮತ್ತು ಶಂಕರ ಮಠವು ಅಯೋಧ್ಯೆಯೊಂದಿಗೆ ದೈವಿಕ ಮತ್ತು ಐತಿಹಾಸಿಕ ಸಂಬಂಧವನ್ನು ಹೊಂದಿದೆ ಎಂದು ಹೇಳಿದರು. ಅಯೋಧ್ಯೆಯಲ್ಲಿರುವ ಜನ್ಮಸ್ಥಳದಲ್ಲಿ ಭಗವಾನ್ ರಾಮನ ದೇವಾಲಯದ ನಿರ್ಮಾಣ ಪ್ರಯತ್ನಗಳೊಂದಿಗೆ ಶಂಕರ ಮಠದ ದಾರ್ಶಕರು ನಿಕಟ ಸಂಬಂಧ ಹೊಂದಿದ್ದಾರೆ ಎಂದು ಅವರು ಹೇಳಿದರು.

ಉಡುಪಿ ಪೇಜಾವರ ಮಠದ ಸ್ವಾಮಿ ವಿಶ್ವ ಪ್ರಸನ್ನ ತೀರ್ಥ ಮತ್ತು ಗೋವಿಂದ್ ಗಿರಿ ಮತ್ತು ಇತರರು ಈ ಸಂದರ್ಭದಲ್ಲಿ ಮಾತನಾಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top