ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪ್ರತಿಭಟನಾಕಾರರು ಕೆಂಪು ಕೋಟೆಯನ್ನು ಸುತ್ತುವರಿದು ಧಾರ್ಮಿಕ ಧ್ವಜವನ್ನು ಹಾರಿಸಿದ್ದರ ವಿರುದ್ಧ ತೀವ್ರ ಆಕ್ರೋಶಗಳು ಭುಗಿಲೆದ್ದ ಬೆನ್ನಲ್ಲೇ ಈ ಘಟನೆಯ ಸಂದರ್ಭದಲ್ಲಿ ತಾನು ಸ್ಥಳದಲ್ಲಿ ಹಾಜರಿದ್ದುದ್ದಾಗಿ ಪಂಜಾಬಿ ನಟ ದೀಪ್ ಸಿಧು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಆತ ಕೆಂಪು ಕೋಟೆಯತ್ತ ಸಾಗಲು ರೈತರಿಗೆ ಪ್ರೇರಣೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆತ, ತಾನು ಮತ್ತು ಬೆಂಬಲಿಗರು ರಾಷ್ಟ್ರಧ್ವಜವನ್ನು ತೆಗೆದುಹಾಕಿಲ್ಲ ಎನ್ನುವ ಮೂಲಕ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಕೆಂಪು ಕೋಟೆಯಲ್ಲಿ ಸಾಂಕೇತಿಕ ಪ್ರತಿಭಟನೆಯಾಗಿ ‘ನಿಶಾನ್ ಸಾಹಿಬ್’ ಧ್ವಜವನ್ನು ಹಾಕಿದ್ದೇವೆ ಎಂದಿದ್ದಾನೆ. ಸಿಖ್ ಧರ್ಮದ ಸಂಕೇತವಾದ ‘ನಿಶಾನ್ ಸಾಹಿಬ್’ ಧ್ವಜವನ್ನು ಎಲ್ಲಾ ಗುರುದ್ವಾರ ಸಂಕೀರ್ಣಗಳಲ್ಲಿ ಕಾಣಬಹುದು.
ಮಂಗಳವಾರ ಸಂಜೆ ಫೇಸ್ಬುಕ್ನಲ್ಲಿ ವೀಡಿಯೊ ಪೋಸ್ಟ್ ಮಾಡಿರುವ ಆತ, ಇದು ಯೋಜಿತ ಕ್ರಮವಲ್ಲ ಮತ್ತು ಇದಕ್ಕೆ ಯಾವುದೇ ಕೋಮು ಬಣ್ಣವನ್ನು ನೀಡಬಾರದು ಅಥವಾ ಮೂಲಭೂತವಾದಿಗಳು ಅಥವಾ ಉಗ್ರವಾದಿಗಳು ಎಂದು ಕರೆಯಬಾರದು ಎಂದು ಹೇಳಿದ್ದಾನೆ. “ಹೊಸ ಕೃಷಿ ಮಸೂದೆ ವಿರುದ್ಧ ನಮ್ಮ ಪ್ರತಿಭಟನೆಯನ್ನು ಸಾಂಕೇತಿಕವಾಗಿ ನೋಂದಾಯಿಸಲು, ನಾವು ‘ನಿಶಾನ್ ಸಾಹಿಬ್’ ಮತ್ತು ರೈತ ಧ್ವಜವನ್ನು ಹಾಕಿದ್ದೇವೆ ಮತ್ತು ಕಿಸಾನ್ ಮಜ್ದೂರ್ ಏಕ್ತಾ ಎಂಬ ಘೋಷಣೆಯನ್ನು ಕೂಡ ಕೂಗಿದ್ದೇವೆ” ಎಂದು ಎಂದಿದ್ದಾನೆ.
ಆದರೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಹರಿಯಾಣ ಘಟಕದ ಮುಖ್ಯಸ್ಥ ಗುರ್ನಮ್ ಸಿಂಗ್ ಚಾದುನಿ ಅವರು ಈತ ಪ್ರತಿಭಟನಾಕಾರರನ್ನು ಪ್ರಚೋದಿಸಿ ದಾರಿ ತಪ್ಪಿಸಿದ್ದಾನೆ ಎಂದು ಆರೋಪಿಸಿದ್ದಾರೆ. “ಸಿಧು ಪ್ರತಿಭಟನಾಕಾರರನ್ನು ಕೆಂಪು ಕೋಟೆಗೆ ಕರೆದೊಯ್ದ. ರೈತರು ಎಂದಿಗೂ ಕೆಂಪು ಕೋಟೆಗೆ ಹೋಗಲು ಬಯಸಿರಲಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.