ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಬದಲಿಗೆ ಬಂಗಾಳಿ ನಟ ಪ್ರೊಸೆಂಜಿತ್ ಚಟರ್ಜಿ ಅವರ ಭಾವಚಿತ್ರವನ್ನು ತಪ್ಪಾಗಿ ಅನಾವರಣಗೊಳಿಸಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿರುದ್ಧ ಕೆಲವರು ಅಪಪ್ರಚಾರ ಆರಂಭಿಸಿದ್ದಾರೆ.
ಪ್ರೊಸೆಂಜಿತ್ ಅವರು 2019 ರ ಗುಮ್ನಾಮಿ ಚಲನಚಿತ್ರದಲ್ಲಿ ನೇತಾಜಿಯಾಗಿ ನಟಿಸಿದ್ದರು. ನೇತಾಜಿಯ 125 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಅನಾವರಣಗೊಳಿಸಿದ ಭಾವಚಿತ್ರ ನೇತಾಜಿಯ ನಿಜವಾದ ಛಾಯಾಚಿತ್ರವಲ್ಲ, ಅದು. ಪ್ರೊಸೆಂಜಿತ್ ಅವರದ್ದು ಎಂದು ಕೆಲವರು ಆರೋಪಿಸಿದ್ದಾರೆ.
ರಾಷ್ಟ್ರಪತಿ ವಿರುದ್ಧ ಅವಿವೇಕದ ಆರೋಪ ಮಾಡಿದವರಲ್ಲಿ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸಂಸದೆ ಮಾಹುವಾ ಮೊಯಿತ್ರಾ ಕೂಡ ಸೇರಿದ್ದಾರೆ. ನಂತರ ಅವರು ತಮ್ಮ ಟ್ವೀಟ್ ಅನ್ನು ಅಳಿಸಿದ್ದಾರೆ.
ಮಾಹುವಾ ಮೊಯಿತ್ರಾ ಅವರ ಅಳಿಸಿದ ಟ್ವೀಟ್ಗೆ ಪತ್ರಕರ್ತೆ ನಿಸ್ತುಲಾ ಹೆಬ್ಬಾರ್ ಪ್ರತ್ಯುತ್ತರ ನೀಡಿದ್ದು, ರಾಷ್ಟ್ರಪತಿಗಳು ಅನಾವರಣಗೊಳಿಸಿದ ಭಾವಚಿತ್ರವನ್ನು ವರ್ಣಚಿತ್ರಕಾರ ಪರೇಶ್ ಮೈಟಿ ಚಿತ್ರಿಸಿದ್ದಾರೆ, ನೇತಾಜಿಯ ಮೂಲ ಛಾಯಾಚಿತ್ರವನ್ನು ಆಧರಿಸಿ ಇದನ್ನು ಬಿಡಿಸಲಾಗಿದೆ. ನೇತಾಜೀ ಅವರ ಸೋದರ ಸೊಸೆ ಜಯಂತಿ ಬೋಸ್ ರಕ್ಷಿತ್ ಅವರಿಂದ ಪಡೆದ ಮೂಲ ಚಿತ್ರವನ್ನು ಆಧರಿಸಿ ಬಿಡಿಸಲಾಗಿದೆ ಎಂದಿದ್ದಾರೆ.
ಗುಮ್ನಾಮಿ ಚಲನಚಿತ್ರದ ಪ್ರೊಸೆಂಜಿತ್ನ ಫೋಟೊವನ್ನು ಮತ್ತು ರಾಷ್ಟ್ರಪತಿ ಭವನದಲ್ಲಿನ ಫೋಟೊವನ್ನು ಹಂಚಿಕೊಂಡು ಎರಡು ಫೋಟೋಗಳ ನಡುವಿನ ವ್ಯತ್ಯಾಸವನ್ನು ಎಲ್ಲರೂ ಸ್ಪಷ್ಟವಾಗಿ ನೋಡಬಹುದು. ರಾಷ್ಟ್ರಪತಿ ಭವನದ ಭಾವಚಿತ್ರವು ಪ್ರೊಸೆಂಜಿತ್ನ ಗುಮ್ನಾಮಿ ಫೋಟೋಗೆ ಹೋಲಿಕೆಯನ್ನು ಹೊಂದಿರುವುದಿಲ್ಲ ಎಂದು ಸಹ ನೋಡಬಹುದು ಎಂದಿದ್ದಾರೆ.
Storm in a tea cup. 1. Portrait of Netaji by Paresh Maity based on his original photo. 2. Prosenjit as Netaji. 1. , 2. pic.twitter.com/cJTIGpZmeq
— Nistula Hebbar (@nistula) January 25, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.