ನವದೆಹಲಿ: ವಿಶ್ವಸಂಸ್ಥೆಯು ಗುರುವಾರ ಧಾರ್ಮಿಕ ಸ್ಥಳಗಳನ್ನು ಕಾಪಾಡುವ ನಿರ್ಣಯವನ್ನು ಅಂಗೀಕರಿಸಿದೆ, ಈ ಸಂದರ್ಭವನ್ನು ಬಳಸಿಕೊಂಡ ಭಾರತ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಜನಸಮೂಹವೊಂದು ಹಿಂದೂ ದೇವಾಲಯದ ಮೇಲೆ ನಡೆಸಿದ ವಿಧ್ವಂಸಕ ಕೃತ್ಯವನ್ನು ಪ್ರಸ್ತಾಪಿಸಿ ಪಾಕಿಸ್ಥಾನವನ್ನು ದೂಷಿಸಿದೆ.
“ತೀರಾ ಇತ್ತೀಚೆಗೆ, ಡಿಸೆಂಬರ್ 2020 ರಲ್ಲಿ ಐತಿಹಾಸಿಕ ಹಿಂದೂ ದೇವಾಲಯವೊಂದನ್ನು ಪಾಕಿಸ್ಥಾನದ ಕರಾಕ್ ಪಟ್ಟಣದಲ್ಲಿ ಜನಸಮೂಹವು ಆಕ್ರಮಣ ಮಾಡಿ ಬೆಂಕಿ ಹಚ್ಚಿತು. ಕಾನೂನು ಜಾರಿ ಸಂಸ್ಥೆಗಳ ಸ್ಪಷ್ಟ ಬೆಂಬಲ ಮತ್ತು ಸಹಕಾರದೊಂದಿಗೆ ಈ ಕೃತ್ಯ ನಡೆದಿದೆ. ಐತಿಹಾಸಿಕ ದೇವಾಲಯಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಪೊಲೀಸರು ಮೂಕ ಪ್ರೇಕ್ಷಕರಾಗಿ ವೀಕ್ಷಿಸಿದ್ದಾರೆ” ಎಂದು ಭಾರತೀಯ ರಾಯಭಾರಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.
“ಹಿಂದೂ ದೇವಾಲಯವೊಂದರ ಮೇಲೆ ಇತ್ತೀಚಿನ ದಾಳಿ ಮತ್ತು ನೆಲಸಮಗೊಳಿಸುವಿಕೆಯು ಇಂತಹ ದಾಳಿಗಳ ಸರಣಿಯಲ್ಲಿ ಒಂದಾಗಿದೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಆ ದೇಶ ಕಸಿದುಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.