ನವದೆಹಲಿ: ಗಮನಾರ್ಹ ಬೆಳವಣಿಗೆಯಲ್ಲಿ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ನಿಯಂತ್ರಣ ರೇಖೆ (ಎಲ್ಒಸಿ)ಯಲ್ಲಿ ಗಡಿಯಾಚೆಗಿನ ಒಳನುಸುಳುವಿಕೆ 2020 ವರ್ಷದಿಂದ ಶೇ 70 ರಷ್ಟು ಕುಸಿದಿದೆ ಎಂದು ಮೂಲಗಳು ವರದಿ ಮಾಡಿವೆ.
ಈ ಅಂಕಿ ಅಂಶವನ್ನು ಹಂಚಿಕೊಂಡ ಭಾರತೀಯ ಸೇನೆಯ 15 ಕಾರ್ಪ್ಸ್ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರು, ನಿಯಂತ್ರಣ ರೇಖೆಯ ಸೇನೆಯ ಸಂಪೂರ್ಣ ನಿಯಂತ್ರಣದಲ್ಲಿದೆ ಮತ್ತು ಎಲ್ಲಾ ಆಕಸ್ಮಿಕಗಳಿಗೆ ಯೋಧರು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ಲೆಫ್ಟಿನೆಂಟ್ ಜನರಲ್ ರಾಜು ಮಾತನಾಡಿ, “ಪಾಕಿಸ್ಥಾನ ಭಯೋತ್ಪಾದಕರನ್ನು ಭಾರತದ ಒಳಗೇ ನುಸುಳಿಸಲು ಮತ್ತು ನಮ್ಮ ಪ್ರದೇಶಗಳಲ್ಲಿ ಕಿಡಿಗೇಡಿತನ ಮಾಡಲು ಮುಂದಾಗುತ್ತಿರುವ ಕಾರಣ ನಿಯಂತ್ರಣ ರೇಖೆಯು ಸಾಕಷ್ಟು ಸಕ್ರಿಯವಾಗಿದೆ. ಹಿಮದ ತೀವ್ರತೆಯ ಲಾಭವನ್ನು ದುಷ್ಟರ ಶಕ್ತಿಗಳು ಪಡೆಯಲು ಬಳಸುತ್ತಿವೆ. ಆದರೆ ಸೇನೆ ಕಟ್ಟೆಚ್ಚರದಿಂದ ಇದೆ” ಎಂದಿದ್ದಾರೆ.
ಒಳನುಸುಳುವಿಕೆ ವಿರೋಧಿ ವ್ಯವಸ್ಥೆಯನ್ನು ಆಧರಿಸಿದ ಬಲಿಷ್ಠ ಒಳನುಸುಳುವಿಕೆ ವಿರೋಧಿ ಗ್ರಿಡ್ ಅನ್ನು ಸೇನೆ ಹೊಂದಿದೆ ಎಂದು ಲೆಫ್ಟಿನೆಂಟ್ ಜನರಲ್ ರಾಜು ವಿಶ್ವಾಸದಿಂದ ಹೇಳಿದ್ದಾರೆ. ಇದು ದೈಹಿಕ ಅಡೆತಡೆಗಳು, ಸೈನಿಕರು ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿದೆ, ಇದು ಒಳನುಸುಳುವವರನ್ನು ಸದೆ ಬಡಿಯುತ್ತದೆ , ಪತ್ತೆ ಮಾಡುತ್ತದೆ ಮತ್ತು ತಟಸ್ಥಗೊಳಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.