ನವದೆಹಲಿ: ಇಂದು ವರ್ಚುವಲ್ ಆಗಿ 16 ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಗತ್ತಿನಾದ್ಯಂತ ಭಾರತದ ಘನತೆ ಮತ್ತು ಸಂಸ್ಕೃತಿಯನ್ನು ಮುಂದೆ ಕೊಂಡೊಯ್ಯಲು ತಂತ್ರಜ್ಞಾನವನ್ನು ಬಳಸಬೇಕೆಂದು ಯುವಕರಿಗೆ ಕರೆ ನೀಡಿದರು.
“ಇಂದು ಇಂಟರ್ನೆಟ್ ವಿಶ್ವದ ವಿವಿಧ ಮೂಲೆಗಳ ಜನರನ್ನು ಸಂಪರ್ಕಿಸಿದೆ ಆದರೆ ದೇಶದ ಬಗೆಗಿನ ನಮ್ಮ ಪ್ರೀತಿ ಪರಸ್ಪರ ನಮ್ಮ ಹೃದಯಗಳು ಬೆಸೆದಿದೆ. ಕಳೆದ ಹಲವು ವರ್ಷಗಳಲ್ಲಿ, ಅನಿವಾಸಿ ಭಾರತೀಯರು ಸಮಾಜದ ಸುಧಾರಣೆಗೆ ತಮ್ಮ ಬದ್ಧತೆಯನ್ನು ತೋರಿಸುವ ಮೂಲಕ ತಮ್ಮ ಗುರುತನ್ನು ಬಲಪಡಿಸಿದ್ದಾರೆ. ಎನ್ಆರ್ಐಗಳು ಮುಂದೆ ಬಂದು ಅಗತ್ಯವಿರುವವರಿಗೆ ಸಹಾಯ ಮಾಡುವ ಹೃದಯಸ್ಪರ್ಶಿ ಕಥೆಗಳನ್ನು ಕೇಳಿ ಹೆಮ್ಮೆಪಡುತ್ತಿದ್ದೇವೆ” ಎಂದು ಮೋದಿ ಹೇಳಿದರು.
“ಇಂದು ಭಾರತವು ಭ್ರಷ್ಟಾಚಾರವನ್ನು ಸೋಲಿಸಲು ತಂತ್ರಜ್ಞಾನವನ್ನು ಬಳಸುತ್ತಿದೆ ಮತ್ತು ಕೋಟ್ಯಾಂತರ ರೂಪಾಯಿಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಇಂದು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ತೆರಿಗೆ ಪರಿಸರ ವ್ಯವಸ್ಥೆ ಜಾಗತಿಕ ವಲಯದಲ್ಲಿ ಪ್ರಮುಖವಾಗಿದೆ. ಕೋವಿಡ್ ಸಮಯದಲ್ಲಿ, ಹಲವಾರು ಹೊಸ ಯುನಿಕಾರ್ನ್ಗಳು ಮತ್ತು ಟೆಕ್ ಸ್ಟಾರ್ಟ್ ಅಪ್ಗಳು ಭಾರತದಿಂದ ಪ್ರಾರಂಭವಾದವು” ಎಂದು ಮೋದಿ ಹೇಳಿದರು.
“ಆರೋಗ್ಯಕರ ಬದಲಾವಣೆಗಳನ್ನು ತರಲು ಭಾರತವು ಶಿಕ್ಷಣದಿಂದ ಉದ್ಯಮದವರೆಗೆ ರಚನಾತ್ಮಕ ಸುಧಾರಣೆಗಳನ್ನು ಮಾಡಿದೆ ಎಂದು ಪ್ರಧಾನಿ ಹೇಳಿದರು. ದೇಶದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ಭಾರತವು ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ- ಪಿಎಲ್ಐ ಯೋಜನೆಯನ್ನು ಪ್ರಾರಂಭಿಸಿದೆ, ಇದು ಬಹಳ ಕಡಿಮೆ ಸಮಯದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.