ನವದೆಹಲಿ: ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿದ ಇಬ್ಬರು ಹುಡುಗರನ್ನು ಭಾರತ ಮತ್ತು ಪಾಕಿಸ್ಥಾನ ಪರಸ್ಪರ ಹಸ್ತಾಂತರ ಮಾಡಿವೆ. ಶುಕ್ರವಾರ ಇಬ್ಬರು ಬಾಲಕರನ್ನು ಅವರವರ ದೇಶಗಳಿಗೆ ವಾಪಸ್ ಕಳುಹಿಸಲಾಗಿದೆ.
ಭಾರತವು ಅಲಿ ಹೈದರ್ ಎಂಬ ಹುಡುಗನನ್ನು ಪಾಕಿಸ್ಥಾನಕ್ಕೆ ವಾಪಸ್ ಕಳುಹಿಸಿದೆ ಮತ್ತು ಪಾಕಿಸ್ಥಾನ ಪೂಂಚ್ ಸೆಕ್ಟರ್ನಲ್ಲಿ ಆಕಸ್ಮಿಕವಾಗಿ ಪಿಒಕೆ ದಾಟಿದ್ದ ಮೊಹಮ್ಮದ್ ಬಶೀರ್ ಎಂಬ ಭಾರತೀಯ ಪ್ರಜೆಯನ್ನು ವಾಪಸ್ ಕಳುಹಿಸಿದೆ.
ಪಿಒಕೆಯ ಮಿರ್ಪುರ್ ಜಿಲ್ಲೆಯ 14 ವರ್ಷದ ಅಲಿ ಅಜಾಗರೂಕತೆಯಿಂದ ಭಾರತದ ಗಡಿ ದಾಟಿದ್ದಾನೆ ಎಂದು ಪಾಕಿಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ಥಾನದ ಕಸ್ಟಡಿಯಲ್ಲಿ 16 ದಿನಗಳ ಕಾಲ ಇದ್ದ ಭಾರತೀಯ ಬಾಲಕನನ್ನು ಭಾರತಕ್ಕೆ ಹಸ್ತಾಂತರ ಮಾಡಿದ್ದಾರೆ.
ಭಾರತದ ವಶದಲ್ಲಿದ್ದ ಪಾಕಿಸ್ಥಾನದ ಬಾಲಕ ಅಲಿಯನ್ನು ಭಾರತೀಯ ಸೇನಾ ಅಧಿಕಾರಿಗಳು ಪಾಕಿಸ್ಥಾನಕ್ಕೆ ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಭಾರತೀಯ ಯೋಧರು ಅತ್ಯಂತ ಉತ್ತಮ ವ್ಯಕ್ತಿಗಳು ಎಂದು ಬಾಲಕ ಹೇಳಿದ್ದಾನೆ.
“ನನಗೆ ಭಾರತೀಯ ಯೋಧರು ಬಟ್ಟೆ, ಶೂ ಮತ್ತು ಆಹಾರವನ್ನು ನೀಡಿದ್ದಾರೆ. ಅವರು ಅತ್ಯುತ್ತಮ ಜನಗಳು” ಎಂದಿದ್ದಾನೆ.
ಮತ್ತೊಂದು ಸುದ್ದಿಯಲ್ಲಿ, ಪಾಕಿಸ್ಥಾನದ ಪಡೆಗಳು ಜನವರಿ 5 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ಫಾರ್ವರ್ಡ್ ಪೋಸ್ಟ್ಗಳಲ್ಲಿ ಗುಂಡು ಹಾರಿಸಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.