ಚೆನ್ನೈ: ವಿದ್ಯಾರ್ಥಿವೇತನದ ಹೆಸರಿನಲ್ಲಿ ಜನರನ್ನು ವಂಚಿಸಿದ ಮತ್ತು ಹಣವನ್ನು ಲಪಟಾಯಿಸಿದ ಆರೋಪದ ಮೇಲೆ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಪಾದ್ರಿಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ವಿಕ್ಟರ್ ಜೇಸುದಾಸನ್ ಎಂಬ ಪಾದ್ರಿ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುವ ಹೆಸರಿನಲ್ಲಿ ಹಲವಾರು ಜನರಿಗೆ ಹಣವನ್ನು ವಂಚಿಸಿದ್ದಾನೆ ಎನ್ನಲಾಗಿದೆ.
ಜೇಸುದಾಸನ್ ಒಬ್ಬ ಕಾರ್ಮಿಕನಿಂದ 20,000 ರೂ ಪಡೆದು ವಂಚಿಸಿದ್ದಾನೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಕುಮಾರ್ ಎಂಬ ಕಾರ್ಮಿಕನಿಗೆ ಆತನ ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ ಹಣ ಬೇಕಿತ್ತು. ವೆಲ್ಲೂರಿನ ಸಲವನ್ಪೇಟೆ ಪ್ರದೇಶದ ಆಂಥೋನಿಯರ್ ಕಾಯಿಲ್ ಸ್ಟ್ರೀಟ್ನಲ್ಲಿ ಜೇಸುದಾಸನ್ ನಡೆಸುತ್ತಿರುವ ಟ್ರಸ್ಟ್ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದೆ ಎಂದು ಆತ ತಿಳಿದುಕೊಂಡು ಅಲ್ಲಿಗೆ ತೆರಳಿದ್ದ. ಕುಮಾರ್ ಜೇಸುದಾಸನ್ನನ್ನು ಭೇಟಿಯಾಗಿ ಸಹಾಯವನ್ನು ಕೋರಿದ್ದಾನೆ. ವಿದ್ಯಾರ್ಥಿವೇತನವನ್ನು ಪಡೆಯಲು ಜೇಸುದಾಸನ್ ಕುಮಾರ್ಗೆ 20,000 ರೂ. ನೀಡುವಂತೆ ಕೇಳಿದ್ದ. ಕುಮಾರ್ ಹೇಳಿದ ಮೊತ್ತವನ್ನು ಪಾದ್ರಿಗೆ ನೀಡಿದ್ದಾನೆ. ಆದರೆ, ಹಲವಾರು ದಿನಗಳ ನಂತರವೂ ಕುಮಾರ್ಗೆ ಪಾದ್ರಿಯಿಂದ ಯಾವುದೇ ಹಣ ಬಂದಿಲ್ಲ. ನಂತರ, ಹಣದ ಬಗ್ಗೆ ಪಾದ್ರಿಯನ್ನು ಕೇಳಿದಾಗ, ಪಾದ್ರಿ ಆತನಿಗೆ ಚೆಕ್ ನೀಡಿದ್ದಾನೆ. ಆದರೆ ಚೆಕ್ ಬೌನ್ಸ್ ಆಗಿದೆ. ಕುಮಾರ್ ಜೇಸುದಾಸನ್ ಅನ್ನು ಕೇಳಿದಾಗ ಆತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಕುಮಾರ್ ದೂರಿನ ಮೇರೆಗೆ ಜೇಸುದಾಸನ್ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ಸಮಯದಲ್ಲಿ, ಜೇಸುದಾಸನ್ ಅನೇಕ ಮೋಸದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಈತ ಕಂಗಯನಲ್ಲೂರಿನ ಸುಮಾರು 10 ಜನರಿಂದ ಹಣವನ್ನು ತೆಗೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಈತನ ಟ್ರಸ್ಟ್ನ ಮನೆ ಖರೀದಿಸುವುದು, ವೃದ್ಧಾಪ್ಯ ಭತ್ಯೆ, ವಿದ್ಯಾರ್ಥಿವೇತನ, ಹೊಲಿಗೆ ಯಂತ್ರ, ಅಂಗವಿಕಲರಿಗೆ ವಾಹನಗಳು ಇತ್ಯಾದಿಗಳನ್ನು ಒದಗಿಸುವುದಾಗಿ ಭರವಸೆ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಪ್ರಸ್ತುತ ಪೊಲೀಸ್ ಬಂಧನದಲ್ಲಿ ಇರುವ ಜೇಸುದಾಸನ್ 2 ಲಕ್ಷ 27 ಸಾವಿರ ರುಪಾಯಿ ಮೌಲ್ಯದ ಹಣಕಾಸು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.