ಗುವಾಹಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾತ್ರಿ ಎರಡು ದಿನಗಳ ಅಸ್ಸಾಂ ಪ್ರವಾಸಕ್ಕಾಗಿ ಗುವಾಹಟಿಗೆ ಆಗಮಿಸಿದ್ದಾರೆ.
“ಗುವಾಹಟಿಯನ್ನು ತಲುಪಿದೆ! ಇಂತಹ ಆತ್ಮೀಯ ಸ್ವಾಗತಕ್ಕಾಗಿ ಅಸ್ಸಾಂನ ಜನರಿಗೆ ನಾನು ಹೃದಯ ಪೂರ್ವಕ ಧನ್ಯವಾದ ಹೇಳುತ್ತೇನೆ” ಎಂದು ಶಾ ಇಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಚುನಾವಣಾ ಕಣವಾಗಿರುವ ಅಸ್ಸಾಂನ ಭೇಟಿ ಸಂದರ್ಭದಲ್ಲಿ, ಶಾ ಅವರು ಹೊಸದಾಗಿ ಚುನಾಯಿತರಾದ ರಾಜ್ಯ ಬಿಜೆಪಿ ಸಮಿತಿ ಸದಸ್ಯರನ್ನು ಮತ್ತು ಬೊಡೋಲ್ಯಾಂಡ್ ಪ್ರಾದೇಶಿಕ ಆಡಳಿತ ಮಂಡಳಿಯ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್-ಬಿಜೆಪಿ-ಗಣ ಸುರಕ್ಷಾ ಪಾರ್ಟಿಯ 23 ಸದಸ್ಯರ ನಿಯೋಗವೂ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದೆ. ಬಿಜೆಪಿಯ ಮೈತ್ರಿಯಾದ ಅಸೋಮ್ ಗಣ ಪರಿಷತ್ ಮತ್ತು ರಾಯಭಾರಿಗಳ ಜಂಟಿ ಸಮನ್ವಯ ಸಮಿತಿ ಮತ್ತು ಗಣ ಶಕ್ತಿ ಪಾರ್ಟಿಯ ಪ್ರತಿನಿಧಿಗಳು ಸಹ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಮಧ್ಯ ಅಸ್ಸಾಂನ ಬಟಾದ್ರಾವದಲ್ಲಿ ವೈಷ್ಣವ್ ಸಂತ ಶ್ರೀಮಂತ ಶಂಕರ್ದೇವ ಅವರ ಜನ್ಮಸ್ಥಳವನ್ನು 186 ಕೋಟಿ ರೂ.ವೆಚ್ಚದಲ್ಲಿ ಸುಂದರೀಕರಣ ಮಾಡುವ ಯೋಜನೆಗೆ ಶಾ ಚಾಲನೆ ನೀಡಲಿದ್ದಾರೆ.
‘ಸತ್ರ’ (ವೈಷ್ಣವ್ ಮಠ) ಸುತ್ತಮುತ್ತಲಿನ ಭೂಮಿಯನ್ನು ಅತಿಕ್ರಮಣದಾರರಿಂದ ಮುಕ್ತಗೊಳಿಸಲಾಗಿದೆ ಮತ್ತು ಅಮೃತಸರದ ಸ್ವರ್ಣ ದೇವಾಲಯದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬಯಸಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.