ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕಗೆ ಸಂಬಂಧಿಸಿದಂತೆ ಕೊಂಚ ನಿರಾಳತೆ ಸಿಕ್ಕಿದೆ. ಕಳೆದ 24 ಗಂಟೆಗಳಲ್ಲಿ 871 ರೋಗಿಗಳು ಸಾಂಕ್ರಾಮಿಕ ಉಸಿರಾಟದ ಕಾಯಿಲೆಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಕೊರೋನಾವೈರಸ್ ಪ್ರಕರಣದ ಸಾವಿನ ಪ್ರಮಾಣ ಮಂಗಳವಾರ 2% ಕ್ಕಿಂತ ಕಡಿಮೆಯಾಗಿದೆ.
ಜಾಗತಿಕ ಸರಾಸರಿ ಸಾವಿನ ಪ್ರಮಾಣ ಸುಮಾರು 3.7% ಆಗಿದೆ. ಇದಕ್ಕೆ ಹೋಲಿಸಿದರೆ ಭಾರತದ ಪರಿಸ್ಥಿತಿ ಸುಧಾರಣೆಯಾಗಿದೆ.
ಆಸ್ಪತ್ರೆಗಳಲ್ಲಿ ಸುಧಾರಿತ ಮತ್ತು ಪರಿಣಾಮಕಾರಿ ಕ್ಲಿನಿಕಲ್ ಚಿಕಿತ್ಸೆ, ಸುಧಾರಿತ ಮತ್ತು ಸಮನ್ವಯದ ಸೇವೆಗಳೊಂದಿಗೆ ರೋಗಿಗಳನ್ನು ತ್ವರಿತ ಮತ್ತು ಸಮಯೋಚಿತ ಚಿಕಿತ್ಸೆಗೆ ಒಳಪಡಿಸುತ್ತಿರುವುದು ಸಾವಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ಇದಲ್ಲದೆ, ಸುಮಾರು 16 ಲಕ್ಷ ಚೇತರಿಸಿಕೊಂಡ ಕೋವಿಡ್-19 ರೋಗಿಗಳೊಂದಿಗೆ, ಭಾರತದ ಚೇತರಿಕೆ ಪ್ರಮಾಣವು ಈಗ ಸುಮಾರು 70% ರಷ್ಟಾಗಿದೆ. ಸಮಗ್ರವಾದ ಸ್ಟ್ಯಾಂಡರ್ಡ್ ಆಫ್ ಕೇರ್ ವಿಧಾನದ ಆಧಾರದ ಮೇಲೆ ನಿರ್ಣಾಯಕ ರೋಗಿಗಳ ಪ್ರಮಾಣಿತ ಕ್ಲಿನಿಕಲ್ ನಿರ್ವಹಣೆಯೊಂದಿಗೆ ಪರಿಣಾಮಕಾರಿ ಚಿಕಿತ್ಸೆ, ಆಕ್ರಮಣಕಾರಿ ಮತ್ತು ಸಮಗ್ರ ಪರೀಕ್ಷೆಯ ಯಶಸ್ವಿ ಅನುಷ್ಠಾನವು ಚೇತರಿಕೆಯ ದರದಲ್ಲಿ ಇಂತಹ ತೀವ್ರ ಏರಿಕೆಗೆ ಕಾರಣವಾಗಿದೆ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.