ನವದೆಹಲಿ: ರಾಮ ಲಲ್ಲಾನಿಗೇ ರಾಮ ಜನ್ಮಭೂಮಿ ದೊರೆಯುವಂತೆ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದ 92 ವರ್ಷದ ಹಿರಿಯ ವಕೀಲ ಪರಾಸರನ್ ಅವರು ಮಂದಿರ ನಿರ್ಮಾಣದ ಶಂಕುಸ್ಥಾಪನೆಯ ಶುಭ ಕ್ಷಣಗಳನ್ನು ಮನೆಯಲ್ಲಿಯೇ ಕುಳಿತು ಕುಟುಂಬ ವರ್ಗದ ಜೊತೆಗೆ ದೂರದರ್ಶನದ ಮೂಲಕ ಕಣ್ತುಂಬಿಕೊಂಡರು.
ಕೇವಲ ರಾಮ ಮಂದಿರದ ವಿಚಾರದಲ್ಲಷ್ಟೇ ಅಲ್ಲದೆ ಇವರು ಶಬರಿಮಲೆಯ ವಿಚಾರಕ್ಕೆ ಸಂಬಂಧಿಸಿದಂತೆಯೂ ವಾದ ಮಂಡಿಸಿದ್ದರು. ದೇವಾಲಯದ ಪದ್ಧತಿಗಳು ಮತ್ತು ಆಚಾರ ವಿಚಾರಗಳನ್ನು ಎತ್ತಿ ಹಿಡಿದು ಪರಾಸರನ್ ಅವರು ತಮ್ಮ ವಾದವನ್ನು ನ್ಯಾಯಾಲಯದಲ್ಲಿ ಮಂಡಿಸಿದ್ದರು. ಅಲ್ಲದೆ ತಮ್ಮ ಇಳಿ ವಯಸ್ಸಿನಲ್ಲಿಯೂ ರಾಮ ಜನ್ಮಭೂಮಿ ಹಿಂದೂಗಳಿಗೆ ದೊರಕಬೇಕು ಎಂಬಂತೆ ವಾದ ಮಂಡಿಸಿ, ರಾಮ ಜನ್ಮಭೂಮಿ ವಿವಾದಕ್ಕೆ ಸರಿಯಾದ ತೀರ್ಪು ಹೊರಬೀಳುವಲ್ಲಿಯೂ ಇವರ ಶ್ರಮ ಅಪಾರ.
2003 ಮತ್ತು 2011 ರಲ್ಲಿ ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪುರಸ್ಕಾರಗಳಿಗೆ ಭಾಜನರಾಗಿರುವ ಇವರು 1976 ರಲ್ಲಿ ತಮಿಳು ನಾಡಿನ ಅಡ್ವೋಕೆಟ್ ಜನರಲ್ ಆಗಿ, 1983-89 ರ ವರೆಗೆ ಅಟಾರ್ನಿ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2012 ರಲ್ಲಿ ರಾಷ್ಟ್ರಪತಿಗಳಿಂದ ಆರು ವರ್ಷಗಳ ಅವಧಿಗೆ ರಾಜ್ಯಸಭೆಗೂ ನಾಮನಿರ್ದೇಶಿತರಾಗಿದ್ದರು. ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ಪರಾಸರನ್ ಅವರಿಗಿರುವ ಅಪರಿಮಿತ ತಿಳುವಳಿಕೆಗೆ ಅನೇಕ ಹಿರಿಯ ವಕೀಲರುಗಳೂ ದಂಗಾಗಿದ್ದರು. ಇಂದಿನ ಶುಭ ಗಳಿಗೆಯಲ್ಲಿ ಅವರ ಕೊಡುಗೆಯನ್ನು ನಾವು ಸ್ಮರಿಸಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.