ನವದೆಹಲಿ: ಕೊರೋನಾವೈರಸ್ ಮಹಾಮಾರಿಯ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ವಲಸಿಗ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಇಂತಹ ವಲಸಿಗ ಕಾರ್ಮಿಕರ ಸಹಾಯಕ್ಕೆ ಸೇನಾ ಪತ್ನಿಯರ ಕಲ್ಯಾಣ ಸಂಸ್ಥೆ ಮುಂದಾಗಿದೆ.
ಸಂಸ್ಥೆಯು 2500 ಆಹಾರ ಪೊಟ್ಟಣಗಳನ್ನು ತಯಾರಿಸಿ ಅದನ್ನು ಸರಕಾರದ ಪ್ರತಿನಿಧಿಗಳಿಗೆ ಇಂದು ದೆಹಲಿ ಕಾಂಟ್ ನಲ್ಲಿ ಹಸ್ತಾಂತರ ಮಾಡಿದೆ. ವಲಸಿಗ ಕಾರ್ಮಿಕರಿಗೆ ಈ ಆಹಾರ ಪೊಟ್ಟಣಗಳನ್ನು ಪೂರೈಕೆ ಮಾಡಲಾಗುತ್ತದೆ.
ಈಗಾಗಲೇ ಅಪಾರ ಪ್ರಮಾಣದ ವಲಸಿಗ ಕಾರ್ಮಿಕರು ರಾಷ್ಟ್ರ ರಾಜಧಾನಿಯನ್ನು ತೊರೆದು ತಮ್ಮ ತವರಿಗೆ ಪಲಾಯನ ಮಾಡಿದ್ದಾರೆ. ಹೀಗಾಗಿ ಉಳಿದಿರುವ ಹಲಸಿನ ಕಾರ್ಮಿಕರಿಗೆ ಅಗತ್ಯತೆಗಳನ್ನು ಪೂರೈಸುವ ಮಹತ್ತರವಾದ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ. ಇದನ್ನು ಅರಿತುಕೊಂಡು ಸೇನಾ ಪತ್ನಿಯರ ಕಲ್ಯಾಣ ಸಂಸ್ಥೆ ಆಹಾರಗಳನ್ನು ಒದಗಿಸುವ ಕಾರ್ಯ ಮಾಡುತ್ತಿದೆ.
ದೆಹಲಿಯಲ್ಲಿ ಇದುವರೆಗೆ 87 ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 1251 ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.