ನವದೆಹಲಿ: ಕರಕುಶಲಕರ್ಮಿಗಳ ಮತ್ತು ಕಲಾವಿದರ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಅವರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮ ‘ಹುನರ್ ಹಾಥ್’ ಮಹತ್ವದ ಮೈಲಿಗಲ್ಲನ್ನು ಸಾಧಿಸುತ್ತಿದೆ. ಈ ಕಾರ್ಯಕ್ರಮದಿಂದಾಗಿ ಸುಮಾರು 5,152 ಕುಶಲಕರ್ಮಿಗಳು, ಕಲಾವಿದರು ಮತ್ತು ಪಾಕಶಾಲೆ ತಜ್ಞರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಉದ್ಯಮಿಗಳಿಗೆ, ಕಲಾವಿದರಿಗೆ, ಕರಕುಶಲಕರ್ಮಿಗಳಿಗೆ ಪ್ರದರ್ಶನಗಳನ್ನು, ಮೇಳಗಳನ್ನು, ಆಹಾರ ಮಳಿಗೆಗಳನ್ನು ನಡೆಸಲು ಮತ್ತು ಕೌಶಲ್ಯ ತರಬೇತಿಯನ್ನು ನೀಡಲು ಈ ಕಾರ್ಯಕ್ರಮವು ಸಹಾಯ ಮಾಡುತ್ತದೆ. ಹಣಕಾಸು ವರ್ಷ 2017 ಮತ್ತು 2018ರಲ್ಲಿ ಇಂತಹ ಹಲವಾರು ಕಾರ್ಯಗಳನ್ನು ಇದರಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಿಂದ 5,152 ಮಂದಿಗೆ ಪ್ರಯೋಜನವಾಗಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಲೋಕಸಭೆಗೆ ತಿಳಿಸಿದ್ದಾರೆ.
ಈ ಕಾರ್ಯಕ್ರಮವು 3 ಲಕ್ಷ ಕುಶಲಕರ್ಮಿಗಳು, ಕಲಾವಿದರು ಮತ್ತು ಪಾಕಶಾಲೆಯ ತಜ್ಞರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ” ಎಂದು ಸಚಿವರು ಗುರುವಾರ ಲೋಕಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಯೋಜನ ಪಡೆದ ಕುಶಲಕರ್ಮಿಗಳಲ್ಲಿ, 4,000 ಪುರುಷ ಕುಶಲಕರ್ಮಿಗಳು ಮತ್ತು 1,152 ಮಂದಿ ಮಹಿಳಾ ಕುಶಲಕರ್ಮಿಗಳು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.