ನವದೆಹಲಿ: ಐಐಟಿ-ಬಾಂಬೆಯ ಪಿಎಚ್ಡಿ ವಿದ್ಯಾರ್ಥಿನಿ ಜಯೀತಾ ಸಹಾ ಅವರು ಜೂನ್ನಲ್ಲಿ ಜರ್ಮನಿಯ ಲಿಂಡೌನಲ್ಲಿ ನಡೆಯಲಿರುವ ಲಿಂಡೌ ನೊಬೆಲ್ ಪುರಸ್ಕೃತರ ಸಭೆ 2020 ರಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಪ್ರತಿಷ್ಠಿತ ಸಂಸ್ಥೆಯ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾಗಿರುವ ಜಯೀತಾ, ಜೂನ್ 28 ರಿಂದ ಜುಲೈ 3 ರವರೆಗೆ ಜರ್ಮನಿಯಲ್ಲಿ ನಡೆಯಲಿರುವ ಈ ಮೀಟಿಂಗ್ನಲ್ಲಿ ಭಾಗಿಯಾಗಲು ವಿಶ್ವಾದ್ಯಂತದಿಂದ ಆಯ್ಕೆಯಾದ ಸುಮಾರು 600ಕ್ಕೂ ಹೆಚ್ಚು ಆರಂಭಿಕ ಹಂತದ ಸಂಶೋಧಕರಲ್ಲಿ ಒಬ್ಬರು. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಕೆಯನ್ನು ಶಾರ್ಟ್ ಲಿಸ್ಟ್ ಮಾಡಿತು.
ಲಿಂಡೌ ನೊಬೆಲ್ ಪುರಸ್ಕೃತರ ಸಭೆ 2020ಕ್ಕೆ ಅವರ ಉಮೇದುವಾರಿಕೆಯನ್ನು ಅಂತರರಾಷ್ಟ್ರೀಯ ಲಿಂಡೌ ಸಮಿತಿಯು ಆಯ್ಕೆ ಮಾಡಿತು. “ಲಿಂಡೌ ಮೀಟಿಂಗ್ ವಿವಿಧ ವಿಭಾಗಗಳಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಸುಮಾರು 70 ಮಂದಿಯನ್ನು ಒಟ್ಟುಗೂಡಿಸುತ್ತದೆ. ಇವರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಆರಂಭಿಕ ಹಂತದ ಸಂಶೋಧಕರೊಂದಿಗೆ ತಾಂತ್ರಿಕ ಮತ್ತು ತಾಂತ್ರಿಕೇತರ ಸಂವಹನಗಳನ್ನು ನಡೆಸುತ್ತಾರೆ”ಎಂದು ಐಐಟಿ ಬಾಂಬೆ ಹೇಳಿಕೆಯಲ್ಲಿ ತಿಳಿಸಿದೆ. ಸಭೆಯಲ್ಲಿ ಜಯೀತಾ ಭಾಗವಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಅದು ಹೇಳಿಕೊಂಡಿದೆ.
ಐಐಟಿ-ಬಿ ಯಲ್ಲಿ ನಾಮೋಮೆಟೀರಿಯಲ್ಗಳೊಂದಿಗೆ ಎಲೆಕ್ಟ್ರೋಕ್ಯಾಟಲಿಸಿಸ್ನಲ್ಲಿ ಕೆಲಸ ಮಾಡುವ ಜಯೀತಾ, ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿದ, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಜಾನ್ ಬಿ ಗುಡೆನೊಗ್ ಅವರನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದಾರೆ.
ಲಿಂಡೌ ನೊಬೆಲ್ ಸಭೆಗಳಲ್ಲಿ ನೊಬೆಲ್ ಪ್ರಶಸ್ತಿ ವಿಜೇತರ ಉಪನ್ಯಾಸಗಳು, ಅಂತರಶಿಕ್ಷಣ ವಿಷಯಗಳ ಕುರಿತು ರೌಂಡ್ ಟೇಬಲ್ ಚರ್ಚೆಗಳು ಮತ್ತು ನೊಬೆಲ್ ಪ್ರಶಸ್ತಿ ವಿಜೇತರೊಂದಿಗೆ ಅನೌಪಚಾರಿಕ ಸಭೆಗಳು ನಡೆಯಲಿವೆ.
ಐಐಟಿ ಗಾಂಧಿನಗರದ ರಸಾಯನಶಾಸ್ತ್ರ ವಿಭಾಗ ಇಬ್ಬರು ಪಿಎಚ್ಡಿ ವಿದ್ವಾಂಸರಾದ ಶ್ರೀಮಾಧವಿ ರವಿ ಮತ್ತು ದೆಪೆಂದು ದೋಲುಯಿ ಅವರನ್ನು ಕೂಡ ಈ ವರ್ಷದ ಪ್ರತಿಷ್ಠಿತ 70 ನೇ ಲಿಂಡೌ ನೊಬೆಲ್ ಲಾರೀಯೇಟ್ಸ್ ಸಭೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.