ನವದೆಹಲಿ: ತೆಂಡೂಲ್ಕರ್ ಪವರ್ಟಿ ಲೈನ್ ನಡೆಸಿದ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಬಡತನ 2011ರಲ್ಲಿ ಇದ್ದ 27 ಕೋಟಿಯಿಂದ 2017 ರಲ್ಲಿ 8.4 ಕೋಟಿಗೆ ಇಳಿದಿದೆ.
ಈ ಸಂಶೋಧನೆಯು ”ಭಾರತದಲ್ಲಿ ಬಡತನ, ಅಸಮಾನತೆ ಮತ್ತು ಅಂತರ್ಗತ ಬೆಳವಣಿಗೆ: 2011/12-2017/18” ಎಂಬ ಶೀರ್ಷಿಕೆಯ ಡಿ ಪ್ರಕಟಗೊಂಡಿದ್ದು, ಖ್ಯಾತ ಭಾರತೀಯ ಅರ್ಥಶಾಸ್ತ್ರಜ್ಞರಾದ ಪ್ರಸ್ತುತ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾದ ಸುರ್ಜಿತ್ ಎಸ್ ಭಲ್ಲಾ, ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ವರ್ಮಾನಿ ಮತ್ತು ಅರ್ಥಶಾಸ್ತ್ರ ಸಂಶೋಧಕ ಕರಣ್ ಭಾಸಿನ್ ಈ ಸಂಶೋಧನೆಯನ್ನು ನಡೆಸಿದ್ದಾರೆ.
ಈ ಸಂಶೋಧನೆಯನ್ನು ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (ಎನ್ಸಿಎಇಆರ್) ಗೆ ಪ್ರಸ್ತುತಪಡಿಸಲಾಗಿದೆ.
2011 ರಲ್ಲಿ, ಭಾರತೀಯ ಜನಸಂಖ್ಯೆಯ ಶೇಕಡಾ 14.9 ರಷ್ಟು ಜನರು ಬಡತನದಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಈ ಸಂಖ್ಯೆ 2017 ರಲ್ಲಿ ಶೇ.7 ಕ್ಕೆ ಇಳಿದಿದೆ.
ವಿಶ್ವಬ್ಯಾಂಕ್ ಈಗ ಭಾರತವನ್ನು ಕಡಿಮೆ ಮಧ್ಯಮ-ಆದಾಯದ ದೇಶವೆಂದು ವರ್ಗೀಕರಿಸಿದೆ ಮತ್ತು ದೇಶದ ಬಡತನವು 2011-12ರಲ್ಲಿ ಇದ್ದ 58 ಪ್ರತಿಶತದಿಂದ 2017-18ರಲ್ಲಿ ಶೇಕಡಾ 37 ಕ್ಕೆ ಇಳಿದಿದೆ ಎಂದು ಹೇಳಿದೆ.
ಬಡತನ ಕಡಿಮೆಯಾಗಲು ಹೆಚ್ಚಿನ ಬೆಳವಣಿಗೆಯ ದರ ಮತ್ತು ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂಜಿಎನ್ಆರ್ಇಜಿಎ), ನೇರ ಲಾಭ ವರ್ಗಾವಣೆ, ಪಿಎಂ ಕಿಸಾನ್ ಯೋಜನೆ ಮತ್ತು ಎಲ್ಪಿಜಿ ಸಬ್ಸಿಡಿ ಕಾರಣ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.