ನವದೆಹಲಿ: 2020 ರ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದ ವಿಜೇತರ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದೆ. ಅಸ್ಸಾಂ ಪ್ರಥಮ ಬಹುಮಾನ ಪಡೆದರೆ, ಸ್ಪರ್ಧೆಯಲ್ಲಿ ಒರಿಸ್ಸಾ ಮತ್ತು ಉತ್ತರ ಪ್ರದೇಶ ರನ್ನರ್ ಅಪ್ ಆಗಿವೆ. ವಿಜೇತರಿಗೆ ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಪ್ರಶಸ್ತಿಗಳು ಸಿಗಲಿವೆ.
ಅಸ್ಸಾಂ ಟ್ಯಾಬ್ಲೋ, ಸತ್ರಿಯ ಸಂಪ್ರದಾಯವನ್ನು ಪ್ರಖ್ಯಾತ ‘ಭೋರ್ತಲ್ ನೃತ್ಯ’ದ ಮೂಲಕ ಅನಾವರಣಗೊಳಿಸಿತು. ಖ್ಯಾತ ಸತ್ರಿಯ ಕಲಾವಿದ ನರಹರಿ ಬುರ್ಹಾ ಭಕತ್ ಅವರು ‘ಭೋರ್ತಲ್ ನೃತ್ಯ’ ರೂಪಕವನ್ನು ಕಂಡು ಹಿಡಿದಿದ್ದಾರೆ. ಟ್ಯಾಬ್ಲೋ ಅನ್ನು ಬಿದಿರು ಮತ್ತು ಕಬ್ಬಿನದ ಕರಕುಶಲ ವಸ್ತುಗಳಿಂದ ಅಲಂಕರಿಸಲಾಗಿತ್ತು.
ಸಚಿವಾಲಯಗಳ ಟ್ಯಾಬ್ಲೋಗಳ ಪೈಕಿ, ಜಲ ಶಕ್ತಿ ಸಚಿವಾಲಯಕ್ಕೆ ಪ್ರಶಸ್ತಿ ಲಭಿಸಿದೆ. ಇದರ ಜಲ ಜೀವನ್ ಮಿಷನ್ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಥೀಮ್ ಅನ್ನು ಅತ್ಯುತ್ತಮವೆಂದು ಘೋಷಿಸಲಾಯಿತು.
ದೆಹಲಿಯ ರಾಜ್ಪಥ್ನಲ್ಲಿ ನಡೆದ 71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ರಾಜಸ್ಥಾನ ಮತ್ತು ಅಸ್ಸಾಂ ಸೇರಿದಂತೆ ಒಟ್ಟು 16 ರಾಜ್ಯಗಳ ಮತ್ತು 6 ಕೇಂದ್ರ ಸಚಿವಾಲಯಗಳ ಟ್ಯಾಬ್ಲೋಗಳನ್ನು ಪ್ರದರ್ಶಿಸಲಾಯಿತು.
ರಕ್ಷಣಾ ಸಚಿವಾಲಯವು ಟ್ಯಾಬ್ಲೋಗಳ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ, ಇದು ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳೊಂದಿಗೆ ತಜ್ಞರ ಸಮಿತಿಯನ್ನು ರಚಿಸುತ್ತದೆ. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ತಮ್ಮ ಟ್ಯಾಬ್ಲೋ ಪ್ರದರ್ಶಿಸುವ ಅವಕಾಶವನ್ನು ಪಡೆಯುವ ರಾಜ್ಯಗಳು ಮುಖ್ಯವಾಗಿ ತಮ್ಮ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಟ್ಯಾಬ್ಲೋದಲ್ಲಿ ತೋರಿಸುವ ಮತ್ತು ನೃತ್ಯ ಮತ್ತು ಸಂಗೀತವನ್ನು ಪ್ರದರ್ಶಿಸುವ ಕಾರ್ಯ ಮಾಡುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.