ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ನವದೆಹಲಿಯಲ್ಲಿ ಬ್ರೂ ನಿರಾಶ್ರಿತರ ಪ್ರತಿನಿಧಿಗಳನ್ನು ಭೇಟಿಯಾಗಿ ಅವರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ. ಮಿಜೋರಾಂನ ಬ್ರೂ ನಿರಾಶ್ರಿತರ ಬಿಕ್ಕಟ್ಟನ್ನು ಕೊನೆಗೊಳಿಸುವ ಮತ್ತು ತ್ರಿಪುರಾದಲ್ಲಿ ಅವರಿಗೆ ನೆಲೆ ಒದಗಿಸುವ ಉದ್ದೇಶದಿಂದ ಒಪ್ಪಂದ ಮಾಡಿಕೊಂಡಿದ್ದಾರೆ.
ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಮತ್ತು ಮೀಜೋರಾಂನ ಮುಖ್ಯಮಂತ್ರಿ ಝೋರಾಮ್ತಂಗಾ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಸಭೆಯಲ್ಲಿ, ಸುಮಾರು 34,000 ಬ್ರೂ ನಿರಾಶ್ರಿತರಿಗೆ ತ್ರಿಪುರದಲ್ಲಿ ನೆಲೆ ಕಲ್ಪಿಸಲಾಗುವುದು ಎಂದು ಶಾ ಹೇಳಿದ್ದಾರೆ. ಕೇಂದ್ರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಉದ್ದೇಶಕ್ಕಾಗಿ 600 ಕೋಟಿ ರೂಪಾಯಿ ಪ್ಯಾಕೇಜ್ ಒದಗಿಸಲಿದೆ ಎಂದಿದ್ದಾರೆ.
ಬ್ರೂ ನಿರಾಶ್ರಿತರಿಗೆ ವಸತಿ ನಿರ್ಮಾಣ ಮಾಡಲು 40 ರಿಂದ 30 ಚ. ಅಡಿಗಳಷ್ಟು ಜಮೀನಿನೊಂದಿಗೆ 4 ಲಕ್ಷ ರೂ.ಗಳ ಸ್ಥಿರ ಠೇವಣಿ, 2 ವರ್ಷಗಳವರೆಗೆ ತಿಂಗಳಿಗೆ 5000 ರೂ.ಗಳ ನಗದು ಸಹಾಯ ಮತ್ತು ಉಚಿತ ಪಡಿತರ ಸಿಗಲಿದೆ ಎಂದು ಅವರು ಹೇಳಿದ್ದಾರೆ.
Bru-Reang refugees will be settled in Tripura and Modi govt will give a package of Rs 600 Cr for the rehabilitation process and their all round development. They will get rights on par with normal residents of Tripura and will also get benefit of various social welfare schemes. pic.twitter.com/bhyFDTcA9p
— Amit Shah (@AmitShah) January 16, 2020
I thank and congratulate Prime Minister Shri @NarendraModi ji for this historic agreement.
Under his dynamic leadership, Modi government has been able to find a permanent solution to this long standing issue of rehabilitation of Bru-Reang refugees.
— Amit Shah (@AmitShah) January 16, 2020
ಬ್ರೂ ಜನಾಂಗೀಯರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ಶಾ, ತ್ರಿಪುರ ಮತ್ತು ಮಿಜೋರಾಂ ಸರ್ಕಾರಗಳು ಈಗ ಕೇಂದ್ರದ ಸಹಾಯದಿಂದ ಬ್ರೂ ನಿರಾಶ್ರಿತರ ಕಲ್ಯಾಣಕ್ಕಾಗಿ ಕೆಲಸ ಮಾಡಲಿವೆ ಎಂದು ಹೇಳಿದ್ದಾರೆ.
ತ್ರಿಪುರಾದಲ್ಲಿನ ರೇಂಗ್ಸ್ ಎಂದು ಕರೆಯಲ್ಪಡುವ ಬ್ರೂ ನಿರಾಶ್ರಿತರಿಗೆ ತನ್ನ ರಾಜ್ಯದಲ್ಲಿ ನೆಲೆ ಕಲ್ಪಿಸಲು ತ್ರಿಪುರಾ ಸಿಎಂ ದೇಬ್ ಅವರು 2019 ರ ನವೆಂಬರ್ನಲ್ಲಿ ಒಪ್ಪಿಕೊಂಡರು.
ಬ್ರೂ ನಿರಾಶ್ರಿತರು ಮಿಜೋರಾಂ, ತ್ರಿಪುರ ಮತ್ತು ಬಾಂಗ್ಲಾದೇಶದ ಚಿತ್ತಗಾಂಗ್ ಬೆಟ್ಟದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.