ನವದೆಹಲಿ: ಒಮನ್ ಸುಲ್ತಾನ ಖಬೂಸ್ ಬಿಲ್ ಸೈದ್ ಅಲ್ ಸೈದ್ ಅವರ ನಿಧನದ ಹಿನ್ನಲೆಯಲ್ಲಿ ದೇಶದಲ್ಲಿ ಒಂದು ದಿನಗಳ ಶೋಕಾಚರಣೆಯನ್ನು ನಡೆಸಲು ನಿರ್ಧರಿಸಲಾಗಿದೆ.
79 ವರ್ಷ ವಯಸ್ಸಿನ ಸುಲ್ತಾನ ಜನವರಿ 10 ರಂದು ನಿಧನರಾದರು. 1970 ರಿಂದ ತಮ್ಮ ಸಾವಿನವರೆಗೆ ಅವರು ಒಮನ್ ರಾಷ್ಟ್ರವನ್ನು ಆಳಿದರು. ಅರಬ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಅತೀ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಕೀರ್ತಿ ಇವರದ್ದು.
ಅಗಲಿದ ಗಣ್ಯರ ಗೌರವದ ಸಂಕೇತವಾಗಿ, ಜನವರಿ 13 ರಂದು ಭಾರತದಾದ್ಯಂತ ಒಂದು ದಿನದ ರಾಜ್ಯ ಶೋಕಾಚರಣೆ ನಡೆಯಲಿದೆ ಎಂದು ಭಾರತ ಸರ್ಕಾರ ಘೋಷಿಸಿದೆ.
“ಶೋಕಾಚರಣೆಯ ದಿನದಂದು ಭಾರತದಾದ್ಯಂತ ರಾಷ್ಟ್ರ ಧ್ವಜವನ್ನು ಅರ್ಧದಲ್ಲಿ ಹಾರಿಸಲಾಗುತ್ತದೆ ಮತ್ತು ಆ ದಿನ ಯಾವುದೇ ಅಧಿಕೃತ ಮನರಂಜನೆ ಕಾರ್ಯಕ್ರಮಗಳು ಇರುವುದಿಲ್ಲ” ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಸೂಚನೆಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿದೆ. ಈ ಹಿಂದೆ ಪ್ರಧಾನಿ ಮೋದಿ ಅವರು ಒಮನ್ ಸುಲ್ತಾನನ ನಿಧನಕ್ಕೆ ಸಂತಾಪ ಸೂಚಿಸಿ, ಈ ಪ್ರದೇಶಕ್ಕೆ ಅವರು ಶಾಂತಿಯ ದಾರಿದೀಪ ಎಂದು ಬಣ್ಣಿಸಿದ್ದರು.
His Majesty Sultan Qaboos Bin Said Al Said, Sultan of the Sultanate of Oman has passed away on 10.01.2020. As a mark of respect to the departed dignitary, Government of India has decided that there will be one day’s State Mourning on 13.01.20 throughout India.
— Spokesperson, Ministry of Home Affairs (@PIBHomeAffairs) January 12, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.