ಹೈದರಾಬಾದ್: ಕುಖ್ಯಾತ ಗ್ಯಾಂಗ್ಸ್ಟರ್ ಶೇಖ್ ಸೊಹ್ರಾಬುದ್ದೀನ್ ಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ವರದಿಯನ್ನು ಮಾಡಿದ್ದ ಖ್ಯಾತ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರು ತನ್ನ ಕ್ರಮಕ್ಕೆ ಬೇಷರತ್ ಕ್ಷಮಾಪಣೆಯನ್ನು ಕೇಳಿದ ಹಿನ್ನಲೆಯಲ್ಲಿ ಹೈದರಾಬಾದ್ ಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ.
‘30 ಮಿನಿಟ್ಸ್ – ಸೊಹ್ರಾಬುದ್ದೀನ್, ದಿ ಇನ್ಸೈಡ್ ಸ್ಟೋರಿ ’ ಶೀರ್ಷಿಕೆಯ ಸರ್ದೇಸಾಯಿ ಅವರ ಸೊಹ್ರಾಬುದ್ದೀನ್ ಪ್ರಕರಣದ ಕುರಿತಾದ ಕಾರ್ಯಕ್ರಮದ ವಿರುದ್ಧ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಕಾರಾಗೃಹ ಇಲಾಖೆ ಮಹಾನಿರ್ದೇಶಕ ರಾಜೀವ್ ತ್ರಿವೇದಿ ಅವರು ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಿದ್ದರು. ಮೇ 2007 ರಲ್ಲಿ, ಆಗ ಸಿಎನ್ಎನ್-ಐಬಿಎನ್ನ ಪ್ರಧಾನ ಸಂಪಾದಕರಾಗಿದ್ದ ಸರ್ದೇಸಾಯಿ ಅವರು, ತ್ರಿವೇದಿ ಪಾತ್ರದ ಬಗ್ಗೆ ತಮ್ಮ ಕಾರ್ಯಕ್ರಮದ ಮೂಲಕ ಉಹಾಪೋಹಗಳನ್ನು ಹಬ್ಬಿಸಿದ್ದರು.
ಕ್ರಮಿನಿಲ್ ಮೊಕದ್ದಮೆ ದಾಖಲಾದ ಹಿನ್ನಲೆಯಲ್ಲಿ ನವೆಂಬರ್ 2019 ರಲ್ಲಿ ಸರ್ದೇಸಾಯಿ ಅವರು ಸ್ವಾರ್ನ್ ಮತ್ತು ಸಹಿ ಮಾಡಿದ ಅಫಿಡವಿಟ್ ಅನ್ನು ನ್ಯಾಯಾಲಕ್ಕೆ ಸಲ್ಲಿಕೆ ಮಾಡಿ ತ್ರಿವೇದಿ ಬಗ್ಗೆ ಸುಳ್ಳು ಕಥೆ ಎಂದು ಒಪ್ಪಿಕೊಂಡರು.
ಸೊಹ್ರಾಬುದ್ದೀನ್ ಅನ್ನು ಅಹ್ಮದಾಬಾದಿಗೆ ಕರೆತರಲು ಮತ್ತು ನಂತರ ಕೊಲೆ ಮಾಡಲು ತ್ರಿವೇದಿ ಅವರು ನಕಲಿ ನಂಬರ್ ಪ್ಲೇಟ್ಗಳನ್ನು ಹೊಂದಿರುವ ಕಾರುಗಳನ್ನು ಒದಗಿಸಿದ್ದಾರೆ ಎಂಬ ಆರೋಪವನ್ನು ದೃಢೀಕರಿಸಲು ಯಾವ ಸಾಕ್ಷಿಯೂ ಇಲ್ಲ ಎಂದು ಅವರು ಅಫಿಡವಿಟ್ನಲ್ಲಿ ಸರ್ದೇಸಾಯಿ ತಿಳಿಸಿದ್ದಾರೆ.
“ತ್ರಿವೇದಿ ಬಗ್ಗೆ ನಮ್ಮಿಂದ ಪ್ರಸಾರವಾದ ಸುದ್ದಿ ಸುಳ್ಳು. ನಮ್ಮ ತಪ್ಪನ್ನು ಅರಿತುಕೊಂಡು, ತ್ರಿವೇದಿ ಅವರ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ ಮತ್ತು ಅವರಿಗೆ, ಅವರ ಕುಟುಂಬ ಮತ್ತು ಸ್ನೇಹಿತರಿಗೆ ಉಂಟಾದ ನಷ್ಟ, ನೋವು ಮತ್ತು ಸಂಕಟಗಳಿಗೆ ನನ್ನ ವಿಷಾದವನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುತ್ತೇನೆ ”ಎಂದು ಸರ್ದೇಸಾಯಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.