ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ 2019ರ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದಕ್ಷಿಣ ದೆಹಲಿಯಲ್ಲಿ ಶುಕ್ರವಾರ ‘ಜಿನ್ನಾ ವಾಲಿ ಆಜಾದಿ’ ಎಂಬ ಘೋಷಣೆಗಳು ಕೇಳಿ ಬಂದಿದ್ದವು. ಇದರ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಕಿಡಿಕಾರಿದ್ದಾರೆ. ಜಿನ್ನಾನ ಕುಟುಂಬಿಕರು ಕೂಡ ಪಾಕಿಸ್ಥಾನವನ್ನು ಬಿಟ್ಟು ಭಾರತವನ್ನು ಆಯ್ಕೆ ಮಾಡಿಕೊಂಡು ಇಲ್ಲಿ ನೆಲೆಸಿದ್ದಾರೆ ಎಂದಿದ್ದಾರೆ.
ದೆಹಲಿಯ ಶಶೀನ್ ಬಾಗ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ವೇಳೆ ಜಿನ್ನಾ ವಾಲಿ ಆಜಾದಿ ಘೋಷಣೆ ಮೊಳಗಿದೆ. ‘ಹಮ್ ಲೇಕರ್ ರಹೇಂಗೆ ಆಜಾದಿ, ಜಿನ್ನಾ ವಾಲಿ ಆಜಾದಿ’ ಎಂದು ಪ್ರತಿಭಟನಾಕಾರರು ಬೊಬ್ಬೆ ಹಾಕಿದ್ದಾರೆ.
ಇದರ ವಿರುದ್ಧ ಕಿಡಿಕಾರಿರುವ ಸ್ವಾಮಿ, ಜಿನ್ನಾನ ಕುಟುಂಬಿಕರು ಕೂಡ ಪಾಕಿಸ್ಥಾನವನ್ನು ರಿಜೆಕ್ಟ್ ಮಾಡಿ ಭಾರತದಲ್ಲಿ ಬಂದು ಸೆಟಲ್ ಆಗಿದ್ದಾರೆ ಎಂದಿದ್ದಾರೆ.
“ಜಿನ್ನಾನ ಮಗಳು ಕೂಡ ಪಾಕಿಸ್ಥಾನವನ್ನು ತೊರೆದು ಭಾರತದ ಮುಂಬಯಿಯಲ್ಲಿ ನೆಲೆಸಿ ಪಾರ್ಸಿಯನ್ನು ಮದುವೆಯಾಗಿದ್ದಾರೆ. ಆಕೆ ಮಗ ಮತ್ತು ಮೊಮ್ಮಗ ಮುಂಬಯಿಯಲ್ಲಿ ಕೈಗಾರಿಕೋದ್ಯಮಿಗಳಾಗಿ ಜೀವಿಸುತ್ತಿದ್ದಾರೆ ಎಂದು ಈ ಜಿನ್ನಾ ವಾಲಿ ಆಜಾದಿ ಮರೂನ್ಗಳಿಗೆ ತಿಳಿಸಿ” ಎಂದು ಟ್ವಿಟ್ ಮಾಡಿದ್ದಾರೆ.
PTs: Tell Jinnah wali Azadi morons that the only child of Jinnah, his daughter, rejected Pakistan and chose India and settled down in Mumbai & married a Parsi. Her son and grand sons also live in Mumbai as industrialists.
— Subramanian Swamy (@Swamy39) January 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.