ಜಮ್ಮು: ಜಮ್ಮು ಕಾಶ್ಮೀರದ ಜನರ ದೈನಂದಿನ ಜೀವನ ಸಹಜವಾಗಿಯೇ ಇದೆ ಎಂಬುದಾಗಿ ಭಾರತದಲ್ಲಿನ ವಿಯೆಟ್ನಾಂ ರಾಯಭಾರಿ ಫಮ್ ಸ್ನಹ್ ಚವು ಹೇಳಿದ್ದಾರೆ. ಈ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ 15 ಮಂದಿ ವಿದೇಶಿ ರಾಯಭಾರಿಗಳ ನಿಯೋಗದಲ್ಲಿ ಅವರೂ ಒಬ್ಬರು.
“ನಾವು ನೀಡಿದ ಭೇಟಿ ಅತ್ಯಂತ ಉಪಯುಕ್ತವಾಗಿತ್ತು ಎಂದು ನಾನು ಹೇಳಬಲ್ಲೆ. ಕಣ್ಣಾರೆ ಕಾಣುವುದು ನಂಬಿದಂತೆ. ಕಣ್ಣಾರೆ ಕಂಡು ನಾವು ಅಲ್ಲಿನ ಪರಿಸ್ಥಿತಿಯ ಸಂಪೂರ್ಣ ಚಿತ್ರಣವನ್ನು ಪಡೆದುಕೊಂಡಿದ್ದೇವೆ” ಎಂದಿದ್ದಾರೆ.
“ನಾವು ಅಲ್ಲಿನ ಜನರ ದೈನಂದಿನ ಜೀವನದಲ್ಲಿ ಸಹಜತೆಯನ್ನು ನಾವು ಕಾಣುತ್ತಿದ್ದೇವೆ, ಇದು ಬಹಳ ಸಕಾರಾತ್ಮಕ ಸಂಕೇತವಾಗಿದೆ” ಎಂದು ಅವರು ಹೇಳಿದ್ದಾರೆ. ಈ ಪ್ರದೇಶದ ವಿವಿಧ ವರ್ಗದ ಜನರೊಂದಿಗೆ ನಡೆಸಿದ ಸಂವಹನವು ಅವರು ಪ್ರಸ್ತುತ ಸ್ಥಿತಿಯ ಬಗ್ಗೆ ತುಂಬಾ ಸಂತೋಷವನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಇಲ್ಲಿನ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ವೀಕ್ಷಿಸಲು ವಿದೇಶಿ ರಾಯಭಾರಿಗಳ 15 ಸದಸ್ಯರ ನಿಯೋಗವು ಅಲ್ಲಿಗೆ ತೆರಳಿದೆ. ಅದರಲ್ಲಿ ಫಮ್ ಸ್ನಹ್ ಚವು ಕೂಡ ಒಬ್ಬರು.
ಅಲ್ಲದೇ, “ಸತ್ಯ ಶೋಧಿಸುವ ನಿಯೋಗವಾಗಿ ನಾವು ಅಲ್ಲಿಗೆ ತೆರಳಿಲ್ಲ, ಅಥವಾ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರೂ ನಾವಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.