ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡನೆಗೊಳಿಸಿದ ನಂತರ, ಇದೀಗ ಕೇಂದ್ರ ಸರ್ಕಾರವು ಮಯನ್ಮಾರಿನಿಂದ ಬಂದ ರೊಹಿಂಗ್ಯಾಗಳನ್ನು ವಾಪಾಸ್ ಕಳುಹಿಸುವ ಕಾರ್ಯಕ್ಕೆ ಮುಂದಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ರೋಹಿಂಗ್ಯಾಗಳು ಮಯನ್ಮಾರಿನ ಮುಸ್ಲಿಂ ನಿರಾಶ್ರಿತರಾಗಿದ್ದು, ಅಲ್ಲಿನ ಆಡಳಿತವು ತಮ್ಮನ್ನು ಸಾಮೂಹಿಕ ಕೊಲೆ, ಅತ್ಯಾಚಾರ ಮತ್ತು ಅಗ್ನಿಸ್ಪರ್ಶಕ್ಕೀಡು ಮಾಡುತ್ತಿದೆ ಎಂದು ಆರೋಪಿಸಿ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿದ್ದಾರೆ. ಸಾವಿರಾರು ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೂ ಪಲಾಯನ ಮಾಡಿದ್ದಾರೆ.
ಜಮ್ಮುವಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಜಿತೇಂದ್ರ ಸಿಂಗ್ ಅವರು, “ನಮ್ಮಲ್ಲಿ ರೋಹಿಂಗ್ಯಾಗಳ ಗಣನೀಯ ಜನಸಂಖ್ಯೆ ಇದೆ. ಅವರ ಗಡೀಪಾರು ಬಗ್ಗೆ ಕೇಂದ್ರವು ಕ್ರಮಕೈಗೊಳ್ಳಲಿದೆ. ಇದಕ್ಕಾಗಿ ಅವರ ಪಟ್ಟಿಗಳನ್ನು ಮಾಡಲಾಗುವುದು ಮತ್ತು ಅಗತ್ಯವಿದ್ದಲ್ಲಿ ಅವರ ಬಯೋಮೆಟ್ರಿಕ್ ಪ್ರಮಾಣಪತ್ರಗಳನ್ನು ಸಹ ತೆಗೆದುಕೊಳ್ಳಲಾಗುವುದು. ಸಿಎಎ ರೋಹಿಂಗ್ಯಗಳಿಗೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಅವರು ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದರಲ್ಲ. ಅವರಿಗೆ ಯಾವುದೇ ವಿಧಾನದಲ್ಲೂ ಪೌರತ್ವವನ್ನು ಪಡೆಯಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಮಯನ್ಮಾರಿನಿಂದ ರೋಹಿಂಗ್ಯಾಗಳು ಜಮ್ಮು ಕಾಶ್ಮೀರಕ್ಕೆ ಹೇಗೆ ಬಂದರು ಎಂಬುದನ್ನು ಸಂಶೋಧಕರು ಮತ್ತು ವಿಶ್ಲೇಷಕರು ತಿಳಿಸಬೇಕು ಎಂದಿದ್ದಾರೆ.
ಸಿಎಎ ಬಳಿಕ ರೊಹಿಂಗ್ಯಾಗಳ ಗಡಿಪಾರು ಸರ್ಕಾರದ ಮುಂದಿನ ದೊಡ್ಡ ಯೋಜನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.