ನವದೆಹಲಿ: ಪಾಕಿಸ್ಥಾನದ ನಂಕಾನಾ ಸಾಹೀಬ್ ಗುರುದ್ವಾರದಲ್ಲಿ ಸಿಖ್ಖರ ಮೇಲೆ ನಡೆದ ದೌರ್ಜನ್ಯವನ್ನು ಭಾರತ ಬಲವಾಗಿ ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆ ರಾಷ್ಟ್ರಕ್ಕೆ ಆಗ್ರಹಿಸಿದೆ.
ಭಾರತ ಸರ್ಕಾರ ಶುಕ್ರವಾರ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ, “ಇಂದು ಪವಿತ್ರ ನಂಕಾನಾ ಸಾಹಿಬ್ ಗುರುದ್ವಾರದಲ್ಲಿ ನಡೆಸಲಾದ ವಿಧ್ವಂಸಕ ಕೃತ್ಯದ ಬಗ್ಗೆ ತೀವ್ರ ನಾವು ಕಳವಳವನ್ನು ಹೊಂದಿದ್ದೇವೆ. ಶ್ರೀ ಗುರುನಾನಕ್ ದೇವ್ ಜಿ ಅವರ ಜನ್ಮಸ್ಥಳವಾದ ಪವಿತ್ರ ನಗರವಾದ ನಂಕಾನಾ ಸಾಹಿಬ್ನಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರು ಹಿಂಸಾಚಾರಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಆಗಸ್ಟ್ನಲ್ಲಿ ನಂಕಾನಾ ಸಾಹಿಬ್ ನಗರದ ತನ್ನ ಮನೆಯಿಂದ ಅಪಹರಿಸಲ್ಪಟ್ಟ ಸಿಖ್ ಹುಡುಗಿ ಜಗ್ಜಿತ್ ಕೌರ್ನನ್ನು ಮತಾಂತರಗೊಳಿಸಿದ ನಂತರ ಈ ಖಂಡನೀಯ ಕೃತ್ಯಗಳು ನಡೆದಿದೆ” ಎಂದಿದೆ.
ಅಲ್ಲಿನ ಸಿಖ್ ಸಮುದಾಯದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಕಿಸ್ಥಾನ ಸರ್ಕಾರಕ್ಕೆ ಕೋರಲಾಗಿದೆ.
ಅಲ್ಲದೇ, ಪವಿತ್ರ ಗುರುದ್ವಾರವನ್ನು ಅಪವಿತ್ರಗೊಳಿಸಿದ ಮತ್ತು ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಬಲವಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಸ್ಥಳೀಯ ಮುಸ್ಲಿಮರ ಗುಂಪೊಂದು ಗುರುದ್ವಾರ ನಂಕಾನಾ ಸಾಹಿಬ್ ಮೇಲೆ ಕಲ್ಲು ತೂರಿ ಅದನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದೆ, ಗುರುದ್ವಾರದ ಧರ್ಮಗುರುವಿನ ಮಗಳಾದ ಸಿ ಜಗ್ಜಿತ್ ಕೌರ್ ಅವರನ್ನು ಅಪಹರಿಸಿ ಮತಾಂತರಗೊಳಿಸಿದ ಆರೋಪವನ್ನು ಹೊಂದಿರುವ ಮೊಹಮ್ಮದ್ ಹಸನ್ ಕುಟುಂಬದ ನೇತೃತ್ವದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರತಿಭಟನಾಕಾರರು ಗುರುದ್ವಾರವನ್ನು ನಾಶಪಡಿಸುತ್ತೇವೆ ಮತ್ತು ಈ ಸ್ಥಳದ ಹೆಸರನ್ನು ನಂಕಾನಾ ಸಾಹಿಬ್ನಿಂದ ಗುಲಮಾನ್-ಎ-ಮುಸ್ತಫಾ ಎಂದು ಬದಲಾಯಿಸುತ್ತೇವೆ ಎಂಬ ಘೋಷಣೆಗಳನ್ನು ಹಾಕಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.