ನವದೆಹಲಿ: ಸಿಐಎಸ್ಎಫ್ ಸಿಬ್ಬಂದಿಯ ಸಮಯ ಪ್ರಜ್ಞೆ ಮತ್ತು ತ್ವರಿತ ಕಾರ್ಯದ ಫಲವಾಗಿ ಜನವರಿ 1 ರಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಪ್ರಯಾಣಿಕರೊಬ್ಬರ ಪ್ರಾಣ ಉಳಿದು ಹೋಗಿದೆ.
ಪ್ರಯಾಣಿಕರಾದ ಅಶೋಕ್ ಮಹಾಜನ್ ಅವರು ಬುಧವಾರ ತಡರಾತ್ರಿ ಡೊಮ್ಯಾಸ್ಟಿಕ್ ಸೆಕ್ಯೂರಿಟಿ ಹೋಲ್ಡ್ ಪ್ರದೇಶದ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪ್ರಜ್ಞಾಹೀನರಾಗಿ ಬಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಸಿಐಎಸ್ಎಫ್ ಯೋಧರು ಅವರ ಕಡೆಗೆ ಧಾವಿಸಿ ಹೃದಯಾಘಾತದ ಸಂದರ್ಭದಲ್ಲಿ ತುರ್ತಾಗಿ ನಡೆಸಬೇಕಾದ ವಿಧಾನಗಳನ್ನು ಅನುಸರಿಸಿದ್ದಾರೆ. ಕಾರ್ಡಿಯೋ-ಪಲ್ಮನರಿ ರಿಸುಸಿಟೇಶನ್ (ಸಿಪಿಆರ್) ಅನ್ನು ಯಾವುದೇ ವಿಳಂಬವಿಲ್ಲದೆ ನಿರ್ವಹಿಸಿದರು ಮತ್ತು ಇದು ಅವರಿಗೆ ಮರು ಜೀವವನ್ನು ನೀಡಿತು.
ಘಟನೆ ನಡೆದಾಗ ಮಹಾಜನ್ ತನ್ನ ಸಂಗಡಿಗರೊಂದಿಗೆ ಉದಯಪುರಕ್ಕೆ ಹೋಗುತ್ತಿದ್ದರು. ಅವರ ಗುಂಪಿನ ಸಹ ಪ್ರಯಾಣಿಕರಲ್ಲಿ ಒಬ್ಬರು ಮಾಜಿ ರಾಜತಾಂತ್ರಿಕ ಅಚಲ್ ಮಲ್ಹೋತ್ರಾ.
ಮಲ್ಹೋತ್ರಾ ಅವರು ತ್ವರಿತ ಕ್ರಮಕ್ಕಾಗಿ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ, “ಸಿಐಎಸ್ಎಫ್ ತಂಡವು ತುರ್ತು ವೈದ್ಯಕೀಯ ವಿಧಾನವನ್ನು ಅನುಸರಿಸುವ ಮೂಲಕ ಒಬ್ಬರ ಜೀವವನ್ನು ಕಾಪಾಡಿದೆ. ಕಾನ್ಸ್ಟೇಬಲ್ ಮಧುಸೂದನ್ ಮತ್ತು ಕಾನ್ಸ್ಟೇಬಲ್ ಮನೋಜ್ ಕುಮಾರ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳಿದ್ದಾರೆ.
ಯೋಧರ ಈ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಭಾರೀ ಶ್ಲಾಘನೆಗಳು ಕೇಳಿ ಬರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.