ನವದೆಹಲಿ: ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಿಂದ ಬಂದ ಅಪಾರ ಸಂಖ್ಯೆಯ ಹಿಂದೂ ಮತ್ತು ಸಿಖ್ ವಲಸಿಗರು ಅಮೃತಸರದಲ್ಲಿ ಬೀದಿಗಿಳಿದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿದ್ದಕ್ಕಾಗಿ ಮೋದಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
“ನಾವು ಪಾಕಿಸ್ಥಾನದಿಂದ ಬಂದಿದ್ದೇವೆ. ಆದರೆ ಇಷ್ಟು ವರ್ಷಗಳಿಂದಲೂ ನಾವು ಅಮೃತಸರದಲ್ಲಿ ಪಾಕಿಸ್ಥಾನಿಗಳೆಂದೇ ಕರೆಯಲ್ಪಟ್ಟಿದ್ದೇವೆ. ಆದರೆ ಸಿಎಎ ಜಾರಿಗೆ ಬಂದ ನಂತರ ನಾವು ಹೆಮ್ಮೆಯ ಭಾರತೀಯರು ಎಂದು ಕರೆಯಲ್ಪಡುತ್ತೇವೆ” ಎಂದು ಎರಡು ದಶಕಗಳ ಹಿಂದೆ ಪಾಕಿಸ್ಥಾನದಿಂದ ವಲಸೆ ಬಂದ ಅಮೃತಸರದಲ್ಲಿ ವಾಸಿಸುತ್ತಿರುವ ಸರನ್ ಸಿಂಗ್ ಹೇಳಿದ್ದಾರೆ.
ಹಲವು ವರ್ಷಗಳಿಂದ ಭಾರತದಲ್ಲಿ ಜನಿಸುತ್ತಿರುವ ಇವರಿಗೆ ಪಾಕಿಸ್ಥಾನಿಗಳು ಎಂದು ಗುರುತಿಸಿಕೊಳ್ಳಲು ಇಷ್ಟವಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಂಡ ಹಿನ್ನಲೆಯಲ್ಲಿ ಇವರು ಇನ್ನು ಮುಂದೆ ನಾವು ಭಾರತದ ಹೆಮ್ಮೆಯ ಪ್ರಜೆಗಳು ಎಂಬ ಘನತೆಯೊಂದಿಗೆ ಜೀವಿಸುವ ನಿರೀಕ್ಷೆಯಲ್ಲಿ ಇದ್ದಾರೆ.
“ನಮ್ಮನ್ನು ಭಾರತದ ಪ್ರಜೆಗಳನ್ನಾಗಿ ಮಾಡಲು ಕೇಂದ್ರವು ದಾರಿ ಮಾಡಿಕೊಟ್ಟಿದೆ, ಇದಕ್ಕೆ ಯಾವುದೇ ಅಡೆತಡೆಗಳನ್ನು ಸೃಷ್ಟಿಸದಂತೆ ನಾವೆಲ್ಲರೂ ವಿನಮ್ರವಾಗಿ ಪಂಜಾಬ್ ಸರ್ಕಾರಗಳನ್ನು ವಿನಂತಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಪಂಜಾಬ್ ಸರ್ಕಾರವು ರಾಜ್ಯದಲ್ಲಿ ಶಾಸನವನ್ನು ಜಾರಿಗೆ ತರಲು ಬಿಡುವುದಿಲ್ಲ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಸಿಎಎ ನಮಗೆ ದೇವರು ಕೊಟ್ಟ ವರ ಎಂದು ಹೇಳಿರುವ ಮತ್ತೊಬ್ಬ ವಲಸಿಗ ಹರ್ದ್ವಾರಿ ಲಾಲ್ ಅವರು, ವೀಸಾ ವಿಸ್ತರಿಸುವಲ್ಲಿ ಮತ್ತು ತಮ್ಮ ಮಕ್ಕಳನ್ನು ಶಾಲೆಗಳಲ್ಲಿ ಸೇರಿಸುವಲ್ಲಿ ಸಾಕಷ್ಟು ತೊಂದರೆಗಳನ್ನು ಹಿಂದೆ ಎದುರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇದಲ್ಲದೆ, “ಅಫ್ಘಾನಿಸ್ಥಾನ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನದಂತಹ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮರು ನೆಲೆಸಬಹುದು ಆದರೆ ಹಿಂದೂಗಳಿಗೆ ಭಾರತವೊಂದೇ ಭರವಸೆ. ಕೊನೆಗೂ ನಾವು ಸುರಂಗದ ಕೊನೆಯಲ್ಲಿ ಬೆಳಕನ್ನು ನೋಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.