ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಲ್ಲಿ ಹಲವಾರು ಪ್ರತಿಭಟನೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ಪಾಕಿಸ್ಥಾನದ ಮುಸ್ಲಿಮರಿಗೆ ಭಾರತೀಯ ಪೌರತ್ವವನ್ನು ನೀಡಿದರೆ ವಿಭಜನೆಗೆ ಅರ್ಥವೇ ಇಲ್ಲ ಎಂದು ಹೇಳಿದ್ದಾರೆ. ಅವರ ಈ ಮಾತು ಸಿಕ್ಕಾಬಟ್ಟೆ ವೈರಲ್ ಆಗಿದೆ.
ವಿಭಜನೆಯು ಪಾಕಿಸ್ಥಾನದ ರಚನೆಗೆ ಕಾರಣವಾಯಿತು ಮತ್ತು ಈ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ವೀಡಿಯೊದಲ್ಲಿ ಆ ವ್ಯಕ್ತಿ ಹೇಳಿದ್ದಾರೆ. ಪಾಕಿಸ್ಥಾನದ ಮುಸ್ಲಿಮರು ಭಾರತದಲ್ಲಿ ನೆಲೆಸಲು ಪ್ರಾರಂಭಿಸಿದರೆ ಪಾಕಿಸ್ಥಾನದ ಅಗತ್ಯವಿಲ್ಲ, ಅದನ್ನು ಹಿಂದೂಸ್ತಾನ್ನೊಂದಿಗೆ ವಿಲೀನಗೊಳಿಸಬೇಕು. ಅದೇ ರೀತಿ ಅಫ್ಘಾನಿಸ್ತಾನದಿಂದ ಎಲ್ಲರೂ ಭಾರತಕ್ಕೆ ಬರಲು ಪ್ರಾರಂಭಿಸಿದರೆ, ಅದನ್ನೂ ಭಾರತದೊಂದಿಗೆ ವಿಲೀನಗೊಳಿಸಬೇಕು ಎಂದು ಆ ವ್ಯಕ್ತಿ ಅರ್ಥ ಬದ್ಧವಾಗಿ ಹೇಳಿದ್ದಾರೆ.
ಮುಸ್ಲಿಮರು ದಾರಿ ತಪ್ಪಿದ್ದಾರೆ, ಹೀಗಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಮುಸ್ಲಿಂ ಯುವಕರ ತಪ್ಪಿಲ್ಲ, ಅವರನ್ನು ಪ್ರಚೋದಿಸುವ ಮತ್ತು ದಾರಿ ತಪ್ಪಿಸುವ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡುವ ನಾಯಕರ ತಪ್ಪು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
.@AzmiShabana jawab lo… अफवाह और नफरत फैलाना बंद करिये।#ISupportCAA_NRC https://t.co/XGZbpGYsrb pic.twitter.com/IHWcsmtzAs
— सौरभ त्रिपाठी(Saurabh Tripathi) (@STShandilya) December 21, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.