ನವದೆಹಲಿ: ಪ್ರಸ್ತುತ ಸೇನಾ ಸಿಬ್ಬಂದಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವನೆ ಅವರು ಮುಂದಿನ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಮೂರು ವರ್ಷಗಳ ಸೇವೆಯ ನಂತರ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ನರವನೆ ಅಧಿಕಾರ ಸ್ವೀಕರಿಸಲಿದ್ದಾರೆ.
ಲೆಫ್ಟಿನೆಂಟ್ ಜನರಲ್ ನರವನೆ ಸೆಪ್ಟೆಂಬರ್ ತಿಂಗಳಲ್ಲಿ ಸೇನಾ ಸಿಬ್ಬಂದಿ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಮೊದಲು, ಅವರು ಚೀನಾದೊಂದಿಗೆ ಸುಮಾರು 4,000 ಕಿ.ಮೀ ಗಡಿಯನ್ನು ನೋಡಿಕೊಳ್ಳುವ ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ ಮುಖ್ಯಸ್ಥರಾಗಿದ್ದರು.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಅವರನ್ನು 1980 ರ ಜೂನ್ನಲ್ಲಿ 7 ನೇ ಬೆಟಾಲಿಯನ್, ದಿ ಸಿಖ್ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ಗೆ ನಿಯೋಜಿಸಲಾಯಿತು.
ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಲೆಫ್ಟಿನೆಂಟ್ ಜನರಲ್ ನರವನೆ ಈಶಾನ್ಯ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದಾರೆ. ಆಪರೇಷನ್ ಪವನ್ ಸಮಯದಲ್ಲಿ ಅವರು ಶ್ರೀಲಂಕಾದ ಭಾರತೀಯ ಶಾಂತಿ ಕಾಪಾಡುವಿಕೆಯ ಭಾಗವಾಗಿದ್ದರು. ಅವರು ಮ್ಯಾನ್ಮಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿಯೂ ಅವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅವರ ಬೆಟಾಲಿಯನ್ನ ಕಮಾಂಡ್ಗಾಗಿ ಅವರಿಗೆ ‘ಸೇನಾ ಪದಕ’ (ಡಿಸ್ಟಿಂಗ್ವಿಶ್ಡ್), ನಾಗಾಲ್ಯಾಂಡ್ನ ಇನ್ಸ್ಪೆಕ್ಟರ್ ಜನರಲ್ ಅಸ್ಸಾಂ ರೈಫಲ್ಸ್ (ಉತ್ತರ)ನಲ್ಲಿನ ಸೇವೆಗಾಗಿ ‘ವಿಶೀಷ್ಠ ಸೇವಾ ಪದಕ’ ಮತ್ತು ಪ್ರತಿಷ್ಠಿತ ಸ್ಟ್ರೈಕ್ ಕಾರ್ಪ್ಸ್ನ ‘ಅತೀ ವಿಶಿಷ್ಟ್ ಸೇವಾ ಪದಕ’ವನ್ನು ನೀಡಿ ಪುರಸ್ಕರಿಸಲಾಗಿದೆ. ಸೇನಾ ತರಬೇತಿ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಮಾಡಿದ ಸೇವೆಗಳಿಗಾಗಿ ಅವರಿಗೆ ‘ಪರಮ್ ವಿಶಿಷ್ಠ ಸೇವಾ ಪದಕ’ ನೀಡಿ ಗೌರವಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.