ನವದೆಹಲಿ: ಭಾರತದ ಮೂಲೆಮೂಲೆಯ ಪ್ರದೇಶಗಳಿಗೂ ಸಂಪರ್ಕವನ್ನು ಇನ್ನಷ್ಟು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ನಾಲ್ಕನೇ ಹಂತದ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ (ಉಡೆ ದೇಶ್ ಕೆ ಆಮ್ ನಾಗರಿಕ್) ಯೋಜನೆಗೆ ಚಾಲನೆ ನೀಡಿದೆ.
ಈಶಾನ್ಯ ಪ್ರದೇಶ, ಹಿಮಾಲಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ದ್ವೀಪಗಳನ್ನು ನಾಲ್ಕನೇ ಹಂತದ ಉಡಾನ್ ಯೋಜನೆ ಕೇಂದ್ರೀಕರಿಸಲಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಂಗಳವಾರ ಬಾಕಿ ನಾಲ್ಕನೇ ಹಂತದ ಉಡಾನ್ ಯೋಜನೆಯ ವಿವಿಧ ಮಾರ್ಗಗಳಿಗೆ ವಿವಿಧ ವಿಮಾನಯಾನ ಸಂಸ್ಥೆಗಳಿಂದ ಬಿಡ್ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ.
ನಾಲ್ಕನೇ ಹಂತದ ಉಡಾನ್ ಯೋಜನೆಯಡಿ 20ಕ್ಕಿಂತ ಹೆಚ್ಚು ಸೀಟುಗಳನ್ನು ಹೊಂದಿರುವ ವಿಮಾನಗಳಿಗೆ ಹಾಡುವ ಅವಕಾಶ ಸಿಗಲಿದೆ, ಅವುಗಳು ಆದ್ಯತೆಯ ಮೇರೆಗೆ ಕಾರ್ಯಾಚರಿಸಲಿವೆ. ನಾಲ್ಕನೇ ಹಂತದ ಬಿಡ್ಡಿಂಗ್ ವೇಳೆ NSOP ಲೈಸೆನ್ಸ್ ಅಡಿಯಲ್ಲಿ ಹೆಲಿಕಾಪ್ಟರ್ ಮತ್ತು ಸೀ ಪ್ಲೇನ್ಗಳಿಗೂ ಹಾರಾಟ ನಡೆಸುವ ಅವಕಾಶ ಸಿಗಲಿದೆ.
ಹೊಸ ಹಂತ 500 ಕಿಲೋ ಮೀಟರ್ ವ್ಯಾಪ್ತಿಯ ಕಡಿಮೆ ದೂರ ಮಾರ್ಗಗಳಿಗೆ ಹೆಚ್ಚಿನ ಒತ್ತು ನೀಡಲಿದೆ.
ಉಡಾನ್ ಯೋಜನೆಯನ್ನು 2016ರ ಅಕ್ಟೋಬರ್ನಲ್ಲಿ ಪ್ರಾರಂಭಿಸಲಾಯಿತು. ವಿಮಾನಗಳ ಪ್ರವೇಶವಿಲ್ಲದ ಪ್ರದೇಶಗಳಿಗೆ ವಿಮಾನಯಾನ ಸಂಪರ್ಕವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಮೂರು ಹಂತಗಳನ್ನು ಯಶಸ್ವಿಯಾಗಿ ಪೂರೈಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.