ಶ್ರೀನಗರ: ಭಾರತೀಯ ಸೇನೆಯು ಜಮ್ಮು-ಕಾಶ್ಮೀರದ ಮಕ್ಕಳ ಸಬಲೀಕರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಅದು ಭಾರತ್ ದರ್ಶನ್ ಪ್ರವಾಸದ ಮೂಲಕ ಅಲ್ಲಿನ 82 ಮಕ್ಕಳಿಗೆ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗುವ ಅವಕಾಶವನ್ನು ಕಲ್ಪಿಸಿ ಕೊಡಲಿದೆ.
ಗಡಿ ಭದ್ರತಾ ಪಡೆ (ಬಿಎಸ್ಎಫ್) ಭಾರತ್ ದರ್ಶನ್ ಪ್ರವಾಸವನ್ನು ಆಯೋಜನೆಗೊಳಿಸಿದ್ದು, 82 ಕಾಶ್ಮೀರದ ಮಕ್ಕಳು ಭಾರತದಾದ್ಯಂತ ಪ್ರವಾಸವನ್ನು ನಡೆಸಲಿದ್ದಾರೆ. ಮಾತ್ರವಲ್ಲದೆ ಬೆಂಗಳೂರಿಗೆ ಆಗಮಿಸಿ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಲಿದ್ದಾರೆ.
ಕಾಶ್ಮೀರದ ಗಡಿ ಜಿಲ್ಲೆಯ ಮಕ್ಕಳಿಗೆ ಹೆಚ್ಚಿನ ಅನುಭವವನ್ನು ನೀಡುವ ಸಲುವಾಗಿ ಪ್ರವಾಸವನ್ನು ಆಯೋಜನೆಗೊಳಿಸಿದೆ. ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳನ್ನು ಭೇಟಿ ಆಗುವುದರ ಜೊತೆಗೆ ಈ ಮಕ್ಕಳು ನವದೆಹಲಿ ಮತ್ತು ದಕ್ಷಿಣ ಭಾರತದ ಹಲವಾರು ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ.
ಬಾರಾಮುಲ್ಲಾ, ಕುಪ್ವಾರ, ಹಂಡ್ವಾರ ಮತ್ತು ಬಂಡೀಪೋರಮುಂತಾದ ಜಮ್ಮು-ಕಾಶ್ಮೀರ ಜಿಲ್ಲೆಗಳ ಮಕ್ಕಳು ಪ್ರವಾಸವನ್ನು ನಡೆಸುವ ಅವಕಾಶವನ್ನು ಪಡೆದಿದ್ದಾರೆ. ಹಲವಾರು ಕಠಿಣ ಪರಿಸ್ಥಿತಿಗಳಲ್ಲಿ ಸಂಕಷ್ಟಕ್ಕೊಳಗಾದ ಕುಟುಂಬದಿಂದ ಬಂದ ಮಕ್ಕಳು ಇವರಾಗಿದ್ದಾರೆ. ದೆಹಲಿ, ಆಗ್ರಾ, ಬೆಂಗಳೂರು ಮುಂತಾದ ಹಲವಾರು ಪ್ರದೇಶಗಳಿಗೆ ಭೇಟಿ ನೀಡುವ ಅವಕಾಶ ಇವರಿಗೆ ಸಿಗಲಿದೆ.
ತಮ್ಮ ದೇಶದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳದ ಕಾಶ್ಮೀರಿ ಮಕ್ಕಳಿಗೆ ಭಾರತ ದರ್ಶನ ಮಾಡಿಸುವ ಉದ್ದೇಶವನ್ನು ಇಟ್ಟುಕೊಂಡು ಬಿಎಸ್ಎಫ್ ಭಾರತ ದರ್ಶನ ಪ್ರವಾಸವನ್ನು ಆಯೋಜನೆ ಗಳಿಸಿದೆ ಎಂದು ಬಿಎಸ್ಎಫ್ ನ ಕಾಶ್ಮೀರಿ ರೇಂಜ್ ಇನ್ಸ್ಪೆಕ್ಟರ್ ಜನರಲ್ ಅಜ್ಮಲ್ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.