ಸೋನೆಪುರ್ : ಪ್ರಸ್ತುತ ನಡೆಯುತ್ತಿರುವ ಸೋನೆಪುರ್ ಮೇಳದಲ್ಲಿ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ವತಿಯಿಂದ ನದಿ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ.
ನದಿಯ ಸಂರಕ್ಷಣೆಯಲ್ಲಿ ಮಹತ್ವಪೂರ್ಣವಾದ ಪಾತ್ರವನ್ನು ನದಿ ತಟದಲ್ಲಿ ವಾಸಿಸುವ ಜನರು ವಹಿಸುತ್ತಾರೆ. ಸೋನೆಪುರ್ ಮೇಳಕ್ಕೆ ಗಂಗಾ ನದಿ ತಟದಲ್ಲಿ ವಾಸಿಸುತ್ತಿರುವ ಅನೇಕರು ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಅರಿವು ಮೂಡಿಸುವಂತಹ ಹಲವಾರು ಬ್ಯಾನರ್ ಮತ್ತು ಸಂದೇಶಗಳನ್ನು ಮೇಳದುದ್ದಕ್ಕೂ ಹಾಕಲಾಗಿದೆ. ಇದಕ್ಕಾಗಿ ಪ್ರತ್ಯೇಕ ನಮಾಮಿ ಗಂಗೆ ಪೆವಿಲಿಯನ್ ಅನ್ನು ಹಾಕಲಾಗಿದೆ.
ನದಿ ಸಂರಕ್ಷಣೆಯ ಈ ಅಭಿಯಾನಕ್ಕೆ ಜನರಿಂದ ಅಭೂತಪೂರ್ವವಾದ ಸ್ಪಂದನೆಗಳು ಸಿಗುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಮಾಮಿ ಗಂಗೆ ಫೆವಿಲಿಯನ್ ಸಿಬ್ಬಂದಿ,”ನದಿಯನ್ನು ಶುದ್ಧವಾಗಿಟ್ಟುಕೊಳ್ಳುವಂತೆ ನಾವು ಜನರಿಗೆ ಅರಿವು ಮೂಡಿಸುತ್ತಿದ್ದೇವೆ. ನದಿಗೆ ಪ್ಲಾಸ್ಟಿಕ್ ಅಥವಾ ಇತರ ಹಾನಿಕಾರಕ ವಸ್ತುಗಳನ್ನು ಹಾಕದಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಜನರು ಈ ಅರಿವು ಕಾರ್ಯಕ್ರಮಕ್ಕೆ ಅಭೂತಪೂರ್ವವಾದ ಸ್ಪಂದನೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅಧಿಕ ಪ್ರಮಾಣದಲ್ಲಿ ಆಗಮಿಸಿ ಅರಿವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕೆ ಅತೀವ ಶ್ಲಾಘನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದಿದ್ದಾರೆ.
ಗಂಗಾನದಿಯನ್ನು ದೇಶಾದ್ಯಂತ ಆಧ್ಯಾತ್ಮಿಕ ದೃಷ್ಟಿಯಿಂದ ಅತ್ಯಂತ ಪವಿತ್ರವಾದ ನದಿಯೆಂದು ಪರಿಗಣಿಸಲಾಗಿದೆ. ಹಿಂದೂ ಸಂಪ್ರದಾಯಗಳಿಗೆ ಗಂಗಾ ನದಿಯ ನೀರು ಅತಿ ಪ್ರಮುಖವಾಗಿದೆ.
ನರೇಂದ್ರ ಮೋದಿ ಸರಕಾರವು ಗಂಗಾನದಿಯ ಸ್ವಚ್ಛತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನೇಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಈ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.