ನವದೆಹಲಿ: ಸಾರ್ವಜನಿಕ ಹಣವನ್ನು ಪೋಲು ಮಾಡದೆ ಉಳಿತಾಯ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಆದ್ಯತೆಯಾಗಿದೆ. ತಮ್ಮ ವಿದೇಶ ಪ್ರಯಾಣದ ಸಂದರ್ಭದಲ್ಲಿ ಅವರು ವಿಶ್ರಾಂತಿಯನ್ನು ಪಡೆಯಲು ಮತ್ತು ಸ್ನಾನ ಮಾಡಲು ಐಷಾರಾಮಿ ಹೋಟೆಲುಗಳಲ್ಲಿ ಉಳಿಯುವ ಬದಲು ವಿಮಾನ ನಿಲ್ದಾಣಗಳ ಟರ್ಮಿನಲ್ಸ್ ಗಳಲ್ಲಿ ಇರುವ ವಿಶ್ರಾಂತಿ ಕೊಠಡಿಗಳಲ್ಲಿ ತಂಗುತ್ತಾರೆ ಮತ್ತು ಅಲ್ಲೇ ಸ್ನಾನವನ್ನು ಕೂಡ ಮಾಡುತ್ತಾರೆ. ಸಾಮಾನ್ಯವಾಗಿ ಪ್ರಧಾನಮಂತ್ರಿಗಳು ಸೇರಿದಂತೆ ಇತರ ಗಣ್ಯರುಗಳು ವಿಮಾನಗಳ ಇಂಧನ ಮರುಪೂರಣ ಮುಂತಾದ ತಾಂತ್ರಿಕ ಸಂದರ್ಭಗಳಲ್ಲಿ ವಿಶ್ರಾಂತಿಯನ್ನು ಪಡೆಯಲು ಐಷಾರಾಮಿ ಹೋಟೆಲ್ ಗಳನ್ನು ಬಳಸುತ್ತಾರೆ. ಇದರಿಂದ ಸಾರ್ವಜನಿಕ ಬೊಕ್ಕಸಕ್ಕೆ ತೀವ್ರಸ್ವರೂಪದ ನಷ್ಟವಾಗುತ್ತದೆ. ಆದರೆ ಮೋದಿ ಇದಕ್ಕೆ ತದ್ವಿರುದ್ಧ.
ಮೋದಿಯ ಗುಣದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶ ಪ್ರಯಾಣದ ವೇಳೆ ತಾಂತ್ರಿಕ ನಿಲುಗಡೆ ಅಥವಾ ವಿಮಾನದ ಇಂಧನ ಮರುಪೂರಣದ ಸಂದರ್ಭಗಳಲ್ಲಿ ಐಷಾರಾಮಿ ಹೋಟೆಲ್ಗಳ ಬದಲು ವಿಮಾನ ನಿಲ್ದಾಣಗಳ ವಿಶ್ರಾಂತಿ ಕೊಠಡಿಗಳನ್ನು ಆಶ್ರಯಿಸುತ್ತಾರೆ. ಈ ಮೂಲಕ ಅವರು ಸಾರ್ವಜನಿಕರ ಹಣವನ್ನು ಉಳಿತಾಯ ಮಾಡುತ್ತಾರೆ ಎಂದಿದ್ದಾರೆ.
” ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಶಿಸ್ತುಬದ್ಧ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ, ವಿದೇಶ ಪ್ರಯಾಣದ ವೇಳೆ ಅವರು ಶೇಕಡ 20ಕ್ಕಿಂತಲೂ ಕಡಿಮೆ ಸಿಬ್ಬಂದಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ. ತಮ್ಮ ಅಧಿಕಾರಿ ನಿಯೋಗವು ಐಷಾರಾಮಿ ಕಾರುಗಳನ್ನು ಬಳಸುವುದನ್ನು ಅವರು ಉತ್ತೇಜಿಸುವುದಿಲ್ಲ. ಈ ಹಿಂದೆ ಅಧಿಕಾರಿಗಳು ಪ್ರತ್ಯೇಕ ಕಾರು, ಬಸ್ಸು ಅಥವಾ ದೊಡ್ಡ ವಾಹನಗಳನ್ನು ಬಳಸುತ್ತಿದ್ದರು. ಆದರೆ ಮೋದಿ ಅದೆಲ್ಲವನ್ನು ತಪ್ಪಿಸಿದ್ದಾರೆ” ಎಂದಿದ್ದಾರೆ.
ಎಸ್ಪಿಜಿ ಭದ್ರತೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಗಾಂಧಿ ಕುಟುಂಬ ಹಲವಾರು ಸಂದರ್ಭಗಳಲ್ಲಿ ಎಸ್ಪಿಜಿ ಭದ್ರತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಆದರೆ ಕಳೆದ 20 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಒಂದೇ ಒಂದು ಬಾರಿಯೂ ನಿಯಮವನ್ನು ಉಲ್ಲಂಘನೆ ಮಾಡಿಲ್ಲ” ಎಂದಿದ್ದಾರೆ.
“ಕೆಲವರಿಗೆ ಭದ್ರತೆಯು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕೆಲವರು ಬೇಕಾಬಿಟ್ಟಿಯಾಗಿ ಭದ್ರತೆಯ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಭದ್ರತೆಗೆ ಸಂಬಂಧಿಸಿದ ಪ್ರತಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ, ಭದ್ರತಾ ಶಿಷ್ಟಾಚಾರವನ್ನು ಅವರೆಂದೂ ಮೀರುವುದಿಲ್ಲ. ಈ ವಿಷಯದಲ್ಲಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.