ಪಣಜಿ: ಈ ಹಿಂದೆ ಜಮ್ಮು-ಕಾಶ್ಮೀರದ ರಾಜ್ಯದಲ್ಲಿ ಭ್ರಷ್ಟಾಚಾರ ಎಸಗಿದ್ದ ಚುನಾಯಿತ ರಾಜಕೀಯ ನಾಯಕರುಗಳು, ಮುಖ್ಯಮಂತ್ರಿಗಳು ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾರೆ ಎಂದು ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಆಗಿದ್ದು, ಜಮ್ಮು-ಕಾಶ್ಮೀರದ ರಾಜಕೀಯ ನಾಯಕರುಗಳು ಭ್ರಷ್ಟಾಚಾರವನ್ನು ಎಸಗಿದ ಪರಿಣಾಮವಾಗಿ ಅವರಿಗೆ ದೇಶ ವಿದೇಶದಾದ್ಯಂತ ಆಸ್ತಿಗಳನ್ನು ಖರೀದಿ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.
ಗೋವಾ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಜಮ್ಮು-ಕಾಶ್ಮೀರದಲ್ಲಿ ನಾನು ರಾಜ್ಯಪಾಲನಾಗಿದ್ದ ಸಂದರ್ಭದಲ್ಲಿ ಬ್ಯಾಂಕ್ ಹಗರಣವನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ, ಈ ಹಗರಣದಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಅನೇಕ ಶಾಸಕರು ಕೂಡ ನೇರವಾಗಿ ಭಾಗಿಯಾಗಿದ್ದರು” ಎಂದಿದ್ದಾರೆ.
“ಪ್ರಜಾಪ್ರಭುತ್ವದ ಅನ್ವಯ ಜಮ್ಮು-ಕಾಶ್ಮೀರದಲ್ಲಿ ಆರಿಸಿ ಬಂದಿದ್ದ ಜನಪ್ರತಿನಿಧಿಗಳ ಶಿಕ್ಷಕರಾಗಿದ್ದರು. ಆದರೆ ಇಂದು ಈ ಜನಪ್ರತಿನಿಧಿಗಳ ಬಳಿ ಶ್ರೀನಗರ, ದೆಹಲಿ, ದುಬೈ, ಲಂಡನ್, ಫ್ರಾನ್ಸ್ ಮುಂತಾದ ಕಡೆ ಮನೆಗಳಿವೆ, ಭೂಮಿ ಆಸ್ತಿಗಳಿವೆ, ಹೋಟೆಲುಗಳಲ್ಲಿ ಹೂಡಿಕೆಗಳಿವೆ ಎಂದಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ದುರ್ಬಳಕೆಗೆ ನಾನು ಸಾಕ್ಷಿಯಾಗಿದ್ದೇನೆ. ಆದರೆ ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಚಿಕಿತ್ಸೆಯಿದೆ. ಸಮರ್ಪಕವಾದ ತನಿಖೆ ನಡೆದರೆ ಅಲ್ಲಿನ ಅನೇಕ ಮಂದಿ ಜೈಲಿಗೆ ಹೋಗುತ್ತಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.