ನವದೆಹಲಿ: 26/11 ಮುಂಬೈ ದಾಳಿಯ ದಾಳಿಯ ಕರಾಳ ಘಟನೆ ನಡೆದು ಇಂದಿಗೆ 11 ವರ್ಷ. ಈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸ್ಮರಿಸಿ ನಮನಗಳನ್ನು ಸಲ್ಲಿಸಿದರು.
ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು, “ಮುಂಬೈ ದಾಳಿಯ ಕರಾಳ ಘಟನೆಗೆ 11 ವರ್ಷ. ದಾಳಿಯಲ್ಲಿ ಹುತಾತ್ಮರಾದ ಪ್ರತಿಯೊಬ್ಬರನ್ನೂ ನಾವು ಸ್ಮರಿಸುತ್ತೇವೆ ಮತ್ತು ಅವರ ಕುಟುಂಬದವರ ದುಃಖದೊಂದಿಗೆ ಭಾಗಿಯಾಗುತ್ತೇವೆ. ದೇವರು ರಾಷ್ಟ್ರವು ಅತ್ಯುನ್ನತ ಬಲಿದಾನಗೈದ ಹುತಾತ್ಮರಿಗೆ ಸದಾ ನಮನಗಳನ್ನು ಸಲ್ಲಿಸುತ್ತದೆ. ಎಲ್ಲಾ ತರನಾದ ಭಯೋತ್ಪಾದನೆಯನ್ನು ಮಟ್ಟ ಹಾಕಲು ನಾವು ಕಟಿ ಬದ್ಧರಾಗಿದ್ದೇವೆ” ಎಂದಿದ್ದಾರೆ.
On the 11th anniversary of the Mumbai terror attacks, we remember everyone who lost their lives and mourn with their families. A grateful nation salutes the security personnel who made the supreme sacrifice. We remain firm in our resolve to defeat all forms of terrorism.
— President of India (@rashtrapatibhvn) November 26, 2019
ಅಗಲಿದ ಸೈನಿಕರ ಕುಟುಂಬಗಳೊಂದಿಗೆ ನಾವು ಸದಾ ಇರುತ್ತೇವೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
“2008ರಲ್ಲಿ ಮುಂಬೈ ಉಗ್ರ ದಾಳಿಯಲ್ಲಿ ಕೆಚ್ಚೆದೆಯಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದ ಯೋಧರಿಗೆ ನಮ್ಮ ನಮನಗಳು. ಹುತಾತ್ಮರ ಕುಟುಂಬದೊಂದಿಗೆ ನಾವು ಸದಾ ಇರುತ್ತೇವೆ. ಮಾತೃಭೂಮಿಯನ್ನು ರಕ್ಷಣೆ ಮಾಡುವ ಸಲುವಾಗಿ ತಮ್ಮ ಜೀವವನ್ನು ಬಲಿ ಕೊಟ್ಟ ಯೋಧರ ಶೌರ್ಯ ಮತ್ತು ಸಮರ್ಪಣಾ ಭಾವಕ್ಕೆ ನಮ್ಮ ಸೆಲ್ಯೂಟ್. ಅವರ ತ್ಯಾಗಕ್ಕೆ ಈ ರಾಷ್ಟ್ರ ಸದಾ ಋಣಿಯಾಗಿರುತ್ತದೆ” ಎಂದಿದ್ದಾರೆ.
I salute the bravery and devotion of our security personnel who laid down their lives to protect the motherland. The nation shall forever remain grateful to their sacrifices#MumbaiTerrorAttack
— Vice President of India (@VPSecretariat) November 26, 2019
2008ರ ನವೆಂಬರ್ 11ರಂದು ಮುಂಬಯಿ ಮೇಲೆ ನಡೆದ ಉಗ್ರರ ದಾಳಿಯಲ್ಲಿ 166 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದರು. ಈ ಘಟನೆ ಭಾರತದ ಇತಿಹಾಸದಲ್ಲೇ ಒಂದು ಕರಾಳ ಘಟನೆಯಾಗಿದೆ. ಪಾಕಿಸ್ಥಾನ ಮೂಲದ ಭಯೋತ್ಪಾದಕರು ಕೃತ್ಯ ಎಸಗಿದ್ದರು.
ಈ ದಾಳಿಯ ಬಳಿಕ ಭಾರತವು ದಾಳಿಕೋರರನ್ನು ಶಿಕ್ಷಿಸುವಂತೆ ಪಾಕಿಸ್ಥಾನಕ್ಕೆ ಮನವಿ ಮಾಡಿಕೊಳ್ಳುತ್ತಲೇ ಬಂದಿದೆ. ಆದರೆ ಈ ವಿಷಯದಲ್ಲಿ ಪಾಕಿಸ್ಥಾನ ಮಾತ್ರ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.