ಅಯೋಧ್ಯಾ: ಉತ್ತರಪ್ರದೇಶದ ಇಟ್ಟಿಗೆ ವ್ಯಾಪಾರಿಯೊಬ್ಬರು ಅಯೋಧ್ಯದಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಸಲುವಾಗಿ ವಿಶೇಷ ಇಟ್ಟಿಗೆಗಳನ್ನು ತಯಾರು ಮಾಡುತ್ತಿದ್ದಾರೆ. ಪ್ರತಿ ಇಟ್ಟಿಗೆ ಮೇಲೆ ಶ್ರೀ ರಾಮನ ಹೆಸರನ್ನು ಬರೆಯಲಾಗಿದೆ. ಒಟ್ಟು 51 ಸಾವಿರ ಇಟ್ಟಿಗೆಗಳನ್ನು ಅವರು ಮಂದಿರ ನಿರ್ಮಾಣಕ್ಕಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಬಾಬುರಾವ್ ಯಾದವ್ ವಿಶೇಷ ಇಟ್ಟಿಗೆಗಳನ್ನು ರಾಮಮಂದಿರಕ್ಕಾಗಿ ತಯಾರಿಸುತ್ತಿರುವ ಇಟ್ಟಿಗೆ ವ್ಯಾಪಾರಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, “ನಾವು ವಿಶೇಷ 51000 ಇಟ್ಟಿಗೆಗಳನ್ನು ತಯಾರು ಮಾಡುತ್ತಿದ್ದೇವೆ. ಅಯೋಧ್ಯದಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವುದಕ್ಕಾಗಿ ಈ ಇಟ್ಟಿಗೆಗಳನ್ನು ನಾವು ದಾನ ಮಾಡುತ್ತೇವೆ. ಡಿಸೆಂಬರ್ ಅಥವಾ ಜನವರಿ ಆರಂಭದ ವೇಳೆಗೆ ಇಟ್ಟಿಗೆಗಳು ಸಿದ್ಧವಾಗಲಿದೆ” ಎಂದಿದ್ದಾರೆ.
ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ತಕ್ಷಣದಿಂದಲೇ ಬಾಬುರಾಮ್ ಯಾದವ್ ಅವರು ಇಟ್ಟಿಗೆಯನ್ನು ತಯಾರಿಸಲು ಆರಂಭಿಸಿದ್ದಾರೆ.
ಸುಮಾರು 106 ಮಂದಿ ಕಾರ್ಮಿಕರು ಇಟ್ಟಿಗೆಯನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ಕಾರ್ಮಿಕರು ಚಪ್ಪಲಿಯನ್ನು ಧರಿಸದೆ ಇಟ್ಟಿಗೆಯನ್ನು ತಯಾರು ಮಾಡುತ್ತಿದ್ದಾರೆ. ಪ್ರತಿ ಇಟ್ಟಿಗೆಯೂ 3 ಕೆಜಿ ತೂಕದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.