ನವದೆಹಲಿ: ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಮೂರು ರಾಜ್ಯಗಳ ಒಂಬತ್ತು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ವರದಿಗಳ ಪ್ರಕಾರ, ಮಿಜೋರಾಂನ ಐಜಾಲ್, ಮಣಿಪುರದ ಇಂಫಾಲ್, ಹರಿಯಾಣದ ಗುರುಗ್ರಾಮ್ ಸೇರಿದಂತೆ 9 ನಗರಗಳಲ್ಲಿ ದಾಳಿ ನಡೆಸಲಾಗಿದೆ.
ಸಿಬಿಐ ಇತ್ತೀಚೆಗೆ ಮಣಿಪುರದ ಮಾಜಿ ಸಿಎಂ ಒಕ್ರಾಮ್ ಇಬೋಬಿ ಸಿಂಗ್ ಹಾಗೂ ಮಣಿಪುರ ಡೆವಲಪ್ಮೆಂಟ್ ಸೊಸೈಟಿ ಮಾಜಿ ಅಧ್ಯಕ್ಷ ಮತ್ತು ಇತರ ಐದು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿತ್ತು.
ಆಗಿನ ಮಣಿಪುರ ಡೆವಲಪ್ಮೆಂಟ್ ಸೊಸೈಟಿ (ಎಂಡಿಎಸ್) ಅಧ್ಯಕ್ಷರಾದ ಇಬೋಬಿ ಸಿಂಗ್, ಎಂಡಿಎಸ್ ಮಾಜಿ ಯೋಜನಾ ನಿರ್ದೇಶಕ ವೈ ನಿಂಗ್ಥೆಮ್ ಸಿಂಗ್, ಡಿಎಸ್ ಪೂನಿಯಾ ಸೇರಿದಂತೆ ಹಲವು ಮಂದಿಯ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಆರೋಪಿಗಳು 30.06.2009 ರಿಂದ 06.07.2017 ರವರೆಗೆ ಮಣಿಪುರ ಅಭಿವೃದ್ಧಿ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾಗ, ಇತರರೊಂದಿಗೆ ಪಿತೂರಿ ನಡೆಸಿ ಸರ್ಕಾರದ ಹಣವನ್ನು ಒಟ್ಟು 518 ರೂ.ಗಳಲ್ಲಿ 332 ಕೋಟಿ ರೂ. ಗಳಿಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.