ಅಯೋಧ್ಯಾ: ವಾರ್ಷಿಕ ‘ರಾಮ್ ಬರಾತ್’ (ಮದುವೆ ಮೆರವಣಿಗೆ)ಯು ನವೆಂಬರ್ 21 ರಂದು ಅಯೋಧ್ಯೆಯಿಂದ ನೇಪಾಳದ ಜನಕಪುರಕ್ಕೆ ತೆರಳಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಈ ವರ್ಷ ಆಚರಣೆ ಹಿಂದಿಗಿಂತ ಸ್ವಲ್ಪ ಅದ್ಧೂರಿಯಾಗಿಯೇ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಈ ಕಾರ್ಯಕ್ರಮವನ್ನು ಆಯೋಜನೆಗೊಳಿಸುತ್ತಿದ್ದು, ದೇವರನ್ನು ಬರಾತ್ (ಮದುವೆ ಮೆರವಣಿಗೆ) ಯ ಮೂಲಕ ಅಯೋಧ್ಯೆಯಿಂದ ಜನಕಪುರಕ್ಕೆ ಎರಡು ಅಲಂಕೃತ ರಥಗಳಲ್ಲಿ ಕೊಂಡೊಯ್ಯಲಾಗುತ್ತದೆ. ರಾಮನ ಜೊತೆಗೆ ಭರತ ಮತ್ತು ಲಕ್ಷ್ಮಣರು ಕೂಡ ಇರಲಿದ್ದಾರೆ.
ಸ್ವಾಮೀಜಿಗಳು ಸೇರಿದಂತೆ 200 ಮಂದಿ 12 ವಾಹನಗಳಲ್ಲಿ ಈ ಮೆರವಣಿಗೆಯಲ್ಲಿ ಜನಕಪುರಕ್ಕೆ ತೆರಳಲಿದ್ದಾರೆ. ನ.21ರಂದು ಮೆರವಣಿಗೆ ಹೊರಡಲಿದ್ದು, ನ.28ರಂದು ಜನಕಪುರವನ್ನು ತಲುಪಲಿದೆ. ಜನಕಪುರ ಸೀತಾದೇವಿಯ ಜನ್ಮಸ್ಥಳವಾಗಿದೆ. ರಸ್ತೆ ಮಾರ್ಗದಲ್ಲಿ ಇನ್ನಷ್ಟು ಜನರು ಮೆರವಣಿಗೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಘಾಜಿಯಾಪುರ, ಚಾಪ್ರ, ಪಾಟ್ನಾ, ಸೀತಾಮರ್ಹಿ ಮೂಲಕ ಮೆರವಣಿಗೆ ಸಾಗಲಿದೆ. ಕೆಲವೊಂದು ಸ್ಥಳಗಳಲ್ಲಿ ಮೆರವಣಿಗೆಯನ್ನು ಸ್ಥಗಿತಗೊಳಿಸಿ ವಿಶ್ರಾಂತಿ ಪಡೆಯಲಾಗುತ್ತದೆ.
ಡಿ.1ರಂದು ಜನಕಪುರದಲ್ಲಿ ರಾಮ ಮತ್ತು ಸೀತೆಯ ವಿವಾಹ ಜರುಗಲಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರಿಗೂ ಆಹ್ವಾನ ನೀಡಲಾಗಿದೆ. ನೇಪಾಳದ ರಾಜಮನೆತನವನ್ನೂ ಆಹ್ವಾನಿಸಲಾಗಿದೆ.
ಧಾರ್ಮಿಕತ್ರ ಮಹಾಸಂಘದ ಬ್ಯಾನರ್ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 2002ರಲ್ಲಿ ಧಾರ್ಮಿಕ ಪ್ರವಾಸಗಳನ್ನು ಆಯೋಜಿಸಲು ವಿಎಚ್ಪಿ ಇದನ್ನು ಸ್ಥಾಪಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಇದರ ಪೋಷಕರಲ್ಲಿ ಒಬ್ಬರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.