ಶ್ರೀನಗರ: ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸಲು ಕಠಿಣ ತರಬೇತಿ ಪಡೆದುಕೊಂಡ ಒಟ್ಟು 1145 ಯುವಕರು ಸೋಮವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಕಾಡೆಮಿಯಿಂದ ತೇರ್ಗಡೆಗೊಂಡು ಹೊರ ಬಂದರು.
1145 ತೇರ್ಗಡೆಗೊಂಡ ಯುವಕರಲ್ಲಿ, 39 ವಿಶೇಷ ಕಮಾಂಡೋಗಳು ಮತ್ತು ಪೊಲೀಸರು. ಇವರು ಅಗ್ನಿ ಅನಾಹುತ, ಗಲಭೆ ಮತ್ತು ಕಲ್ಲು ತೂರಾಟದಂತಹ ಕೃತ್ಯಗಳನ್ನು ಎದುರಿಸಲು ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ಹಿನ್ನಲೆಯಲ್ಲಿ ಈ ಪೊಲೀಸರು ಭಾರತದ ಸಂವಿಧಾನದ ನಿಷ್ಠೆಯಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಅವರು ಗಂಡರ್ಬಾಲ್ನಲ್ಲಿ ಪಾಸಿಂಗ್ ಔಟ್ ಪೆರೇಡ್ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಲ್.ಜಿ.ಮರ್ಮು, ಜಮ್ಮು ಮತ್ತು ಕಾಶ್ಮೀರ ಪೊಲೀಸರ ತ್ಯಾಗವನ್ನು ನೆನಪಿಸಿಕೊಂಡರು ಮತ್ತು ಹೊಸದಾಗಿ ನೇಮಕಗೊಂಡ ಪೊಲೀಸರನ್ನು ಶ್ಲಾಘಿಸಿದರು.
ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಎಲ್ಜಿ ಮುರ್ಮು ನವೆಂಬರ್ 14 ರಂದು ಹೇಳಿದ್ದರು. ರಿಯಾಸಿ ಜಿಲ್ಲೆಯ ತಲ್ವಾರಾದ ಸಬ್ಸಿಡಿಯರಿ ತರಬೇತಿ ಕೇಂದ್ರದಲ್ಲಿ ನಡೆದ ಕಾನ್ಸ್ಟೆಬಲ್ಗಳ 14 ನೇ ಬಿಆರ್ಟಿಸಿ ಬ್ಯಾಚ್ನ ಅಟೆಸ್ಟೇಷನ್-ಕಮ್-ಪಾಸಿಂಗ್ ಔಟ್ ಪೆರೇಡ್ನಲ್ಲಿ ಮಾತನಾಡುವಾಗ ಎಲ್.ಜಿ.ಮರ್ಮು ಈ ಹೇಳಿಕೆ ನೀಡಿದ್ದರು.
“ಚುನಾವಣೆ ನಡೆಯುತ್ತದೆ. ಇದು ಶಾಸಕಾಂಗವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿದೆ, ರಾಜ್ಯಪಾಲರ ಆಡಳಿತದಲ್ಲಿ ಸುದೀರ್ಘ ಸಮಯದವರೆಗೆ ಮುಂದುವರೆಯಲು ಸಾಧ್ಯವಿಲ್ಲ. ಚುನಾವಣಾ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ”ಎಂದು ಮುರ್ಮು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.