ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಸಭೆಯ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ರಾಜ್ಯಸಭೆಯ ಮಹತ್ವದ ಬಗ್ಗೆ, ಅದು ನೀಡಿದ ಕೊಡುಗೆಯ ಬಗ್ಗೆ ಸ್ಮರಿಸಿದರು.
“ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಉಪಸ್ಥಿತರಿರುವ ಎಲ್ಲಾ ಸಂಸದರಿಗೂ ಅಭಿನಂದನೆಗಳು. 250ನೇ ಅಧಿವೇಶನದ ಈ ಯಾತ್ರೆಗೆ ಕೊಡುಗೆ ನೀಡಿದ ಎಲ್ಲರೂ ಅಭಿನಂದನೆಗಳಿಗೆ ಅರ್ಹರು, ಅವೆರಲ್ಲರನ್ನೂ ನಾನು ಆದರಪೂರ್ವಕವಾಗಿ ಸ್ಮರಣೆ ಮಾಡುತ್ತೇನೆ” ಎಂದಿದ್ದಾರೆ.
“250ನೇ ಅಧಿವೇಶನ ಕೇವಲ ನಾವು ಕಳೆದು ಸಮಯವಲ್ಲ. ಅದು ಚಿಂತನೆಯ ಯಾತ್ರೆಯಾಗಿದೆ. ಸಮಯ ಬದಲಾಗುತ್ತಾ ಹೋಯಿತು, ಸಂದರ್ಭಗಳು ಬದಲಾದವು ಮತ್ತು ಈ ಸದನವು ಬದಲಾದ ಸನ್ನಿವೇಶಗಳನ್ನು ಒಟ್ಟುಗೂಡಿಸಿ ತನ್ನನ್ನು ತಾನೇ ರೂಪಿಸಿಕೊಳ್ಳಲು ಪ್ರಯತ್ನಿಸಿತು. ಸದನದ ಎಲ್ಲ ಸದಸ್ಯರು ಅಭಿನಂದನೆಗಳಿಗೆ ಪಾತ್ರರು” ಎಂದಿದ್ದಾರೆ.
ಸಂವಿಧಾನ ನಿರ್ಮಾತೃಗಳು ನೀಡಿದ ವ್ಯವಸ್ಥೆಯು ಎಷ್ಟೊಂದು ಸೂಕ್ತವಾದುದು ಎಂಬುದನ್ನು ಅನುಭವಗಳೇ ಹೇಳುತ್ತದೆ. ಇದು ಎಷ್ಟು ದೊಡ್ಡ ಕೊಡುಗೆ ನೀಡಿದೆ. ಕೆಳ ಮನೆಯು ನೆಲದೊಂದಿಗೆ ಬೆಸೆದುಕೊಂಡಿದ್ದರೆ, ಮೇಲಿನ ಮನೆಯಿಂದ ನಾವು ದೂರದವರೆಗೂ ನೋಡಬಹುದು” ಎಂದರು.
ಭಾರತದ ಅಭಿವೃದ್ಧಿ ಪಯಣದಲ್ಲಿ, ನೆಲಕ್ಕೆ ಸಂಬಂಧಿಸಿದ ವಸ್ತುಗಳ ಪ್ರತಿಬಿಂಬವು ಕೆಳ ಮನೆಯಿಂದ ಗೋಚರಿಸುತ್ತದೆ, ನಂತರ ಮೇಲಿನ ಮನೆಯಿಂದ ದೂರದೃಷ್ಟಿಯ ಅನುಭವವಾಗುತ್ತದೆ ಎಂದರು.
ರಾಜ್ಯಸಭೆಯೂ ಪ್ರಜಾಪ್ರಭುತ್ವದ ಅನ್ವಯ ಆರಿಸಿ ಬಂದಿಲ್ಲದ ವಿಜ್ಞಾನಿಗಳು, ಕಲೆ ಮತ್ತು ಕ್ರೀಡಾ ಕ್ಷೇತ್ರದ ಜನರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಂಡಿದೆ . ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಇದಕ್ಕೆ ಉತ್ತಮ ಉದಾಹರಣೆ. ಅವರು ಲೋಕಸಭೆಗೆ ಆಯ್ಕೆಯಾಗಿಲ್ಲದಿದ್ದರೂ, ರಾಜ್ಯಸಭೆಯ ಮೂಲಕ ಕೊಡುಗೆ ನೀಡಿದರು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.